Advertisement

ಕಾರ್ತಿಕ ಆತ್ಮ ಜ್ಯೋತಿ ಬೆಳಗುವ ಹಬ್ಬ

03:42 PM Nov 24, 2019 | Naveen |

ಸಂಡೂರು: ಕಾರ್ತಿಕೋತ್ಸವ ಬರೀ ಕತ್ತಲೆಯನ್ನು ಓಡಿಸಿ ಬೆಳಕನ್ನು ತರುವುದಲ್ಲ, ಅದು ನಮ್ಮ ಮನದಲ್ಲಿಯ ಕತ್ತಲೆಯನ್ನು ತೊಲಗಿಸಿ ಆತ್ಮ ಜ್ಯೋತಿಯನ್ನು ಬೆಳಗುವಂತಹ ಹಬ್ಬವಾಗಿ ಪ್ರತಿಯೊಬ್ಬರೂ ಆಚರಿಸಬೇಕು ಎಂದು ಸಂಡೂರು ವಿರಕ್ತಮಠದ ಪ್ರಭುಮಹಾಸ್ವಾಮೀಜಿ ತಿಳಿಸಿದರು.

Advertisement

ಅವರು ಪಟ್ಟಣ ಕಾಲಪಟ್ಟಿಯ ಕಾಲೋನಿಯಲ್ಲಿ ಬನ್ನಿಮಹಾಂಕಾಳಿ ಸಂಘದವರು ಹಮ್ಮಿಕೊಂಡಿದ್ದ ಕಾರ್ತಿಕೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿ, ಪ್ರಕೃತಿ ಅದ್ಭುತವಾಗಿದ್ದು ತನ್ನದೇ ಅದ ಸಮಯದಲ್ಲಿ ಮಳೆ, ಬಿಸಿಲು, ಚಳಿ, ಬೇಸಿಗೆ ಕಾಲವನ್ನು ತರುತ್ತದೆ. ಕಾರ್ತಿಕ ಮಾಸದಲ್ಲಿ ಬೇಗನೆ ಕತ್ತಲಾಗಿ ಬೇಗನೆ ಬೆಳಗಾಗುತ್ತದೆ, ಇಂಥ ಸಮಯದಲ್ಲಿ ಪ್ರತಿಯೊಬ್ಬರೂ ಸಹ ಸಂಪ್ರದಾಯದ ಹೆಸರಿನಲ್ಲಿ ನಮ್ಮ ರೈತರು ಕಾರ್ತಿಕೋತ್ಸವವನ್ನು ಆಚರಿಸುವ ಮೂಲಕ ಕತ್ತಲನ್ನು ಕಳೆದು ಬೆಳಕನ್ನು ನೀಡುವ ಕಾರ್ಯ ಮಾಡುತ್ತಾರೆ, ಅಲ್ಲದೆ ವೈಜ್ಞಾನಿಕವಾಗಿಯೂ ಸಹ ತನ್ನದೇ ಅದ ಮಹತ್ವವನ್ನು ಹೊಂದಿದ್ದು ಇದರಿಂದ ಕೀಟಗಳ ಬಾಧೆಯನ್ನು ತಡೆಯುವ ಕಾರ್ಯವೂ ಇದಾಗಿದೆ ಎನ್ನುತ್ತಾರೆ, ಎಲ್ಲರೂ ಬದುಕಿನಲ್ಲಿ ಕತ್ತಲೆಯಿಂದ ಬೆಳಕಿನೆಡೆಗೆ ಸಾಗಲಿ ಎಂದರು.

ಯಶವಂತನಗರದ ಶ್ರೀ ಸಿದ್ಧರಾಮೇಶ್ವರ ಸಂಸ್ಥಾನ ವಿರಕ್ತಮಠದ ಗಂಗಾಧರ ದೇವರು ಮಾತನಾಡಿ, ನಮ್ಮ ದೇಶದ ಪ್ರತಿಯೊಂದು ಸಂಪ್ರದಾಯದಲ್ಲಿಯೂ ಸಹ ಒಂದು ವೈಜ್ಞಾನಿಕ ಅಂಶ ಅಡಗಿದೆ. ಅದನ್ನು ಅನುಸರಿಸುವ ಮೂಲಕ ಬದುಕಿನಲ್ಲಿ ಶಾಂತಿ, ನೆಮ್ಮದಿ ಪಡೆದುಕೊಳ್ಳುವುದು ಅತಿ ಅಗತ್ಯವಾಗಿದೆ.

ಕಾರ್ತಿಕದ ನೆಪದಲ್ಲಿ ಎಲ್ಲರೂ ಸಹ ಜಾತಿ, ಮತ, ಧರ್ಮಗಳನ್ನು ದೂರತಳ್ಳಿ ಸಮಾನತೆಯಿಂದ ಪ್ರತಿಯೊಬ್ಬರೂ ಸಹ ಸ್ವ ಇಚ್ಛೆಯಿಂದ ಹೆಣ್ಣು, ಗಂಡು ಸೇರಿ ಸಮಾನವಾಗಿ ದೀಪವನ್ನು ಬೆಳಗುತ್ತಿರುವುದು ಹೆಮ್ಮೆ ಸಂಗತಿಯಾಗಿದೆ. ಅಲ್ಲದೆ ಸಾಮೂಹಿಕ ದಾಸೋಹವನ್ನು ಮಾಡುತ್ತಿರುವುದು ಸಹ ಸಮಾನತೆಯ ಸಂಕೇತವಾಗಿದೆ. ಆದ್ದರಿಂದ ಪ್ರತಿಯೊಬ್ಬರೂ ಸಹ ಇಂಥ ಕಾರ್ಯಗಳಲ್ಲಿ ಭಾಗವಹಿಸುವ ಮೂಲಕ ನಮ್ಮ ಅಹಂಗಳನ್ನು ಮರೆತು, ನೆಮ್ಮದಿ ಬದುಕನ್ನು ಸಾಗಿಸೋಣ, ಕಾರ್ತಿಕದ ಕತ್ತಲೆಯನ್ನು ಓಡಿಸಿ ಬೆಳಕನ್ನು ತರೋಣ ಎಂದರು.

ಕಾರ್ಯಕ್ರಮದಲ್ಲಿ ಇಡೀ ಕಾಲೋನಿಯ ಎಲ್ಲ ಸದ್ಭಕ್ತರು ಸಾಮೂಹಕವಾಗಿ ದೀಪೋತ್ಸವವನ್ನು ಮಾಡಿದರು, ಅಲ್ಲದೆ ಪಟ್ಟಣದ ವಿವಿಧ ಭಾಗಗಳಿಂದ ಅಗಮಿಸಿದ ಮಹಿಳೆಯರು ಅಲಂಕಾರಿಕವಾಗಿ ಅಗಮಿಸಿ ದೀಪ ಬೆಳಗುವ ಮೂಲಕ ಶ್ರೀ ಬನ್ನಿಮಹಾಂಕಾಳಿಗೆ ವಿಶೇಷ ಪೂಜೆಯನ್ನು ಸಲ್ಲಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next