Advertisement

ಸಂದೀಪ್‌ ಎಂಬ ಕಾಮಿಡಿ ಕಿಲಾಡಿ

06:15 AM Aug 25, 2017 | |

ಓದಿಗೂ ವ್ಯಕ್ತಿಯ ಆಸಕ್ತಿಗೂ ಸಂಬಂಧವಿರೋದಿಲ್ಲ ಎಂದು ಈಗಾಗಲೇ ಸಾಬೀತಾಗಿದೆ. ಯಾವುದೋ ವಿಷಯ ಓದಿದವರು, ಇನ್ಯಾವುದೋ ಕ್ಷೇತ್ರದಲ್ಲಿ ತೊಡಗಿಕೊಳ್ಳುತ್ತಾರೆ. ಅದಕ್ಕೆ ಕಾರಣ ಅವರವರ ಆಸಕ್ತಿ. ಅದರಂತೆ ಈಗ ಇಂಜಿನಿಯರಿಂಗ್‌ ಓದಿರುವ ಸಂದೀಪ್‌ ಕೂಡಾ ಸಿನಿಮಾ ಕ್ಷೇತ್ರಕ್ಕೆ ಬಂದಿದ್ದಾರೆ. ಹಾಗಂತ ನಟನೆಗಲ್ಲ. ಬರವಣಿಗೆಗೆ. ಸದ್ಯ ಸಂದೀಪ್‌ “ದುನಿಯಾ’ ವಿಜಯ್‌ ಅವರ “ಜಾನಿ ಜಾನಿ ಯೆಸ್‌ ಪಪ್ಪ’ ಚಿತ್ರಕ್ಕೆ ಸಂಭಾಷಣೆ ಬರೆಯುತ್ತಿದ್ದಾರೆ. 

Advertisement

ಇದಲ್ಲದೇ, ಇನ್ನೂ ಹೆಸರಿಡದ ಚಿತ್ರವೊಂದಕ್ಕೂ ಸಂದೀಪ್‌ ಸಂಭಾಷಣೆಯಲ್ಲಿ ತೊಡಗಿದ್ದಾರೆ. ಇಂಜಿನಿಯರಿಂಗ್‌ ಓದಿದ ಸಂದೀಪ್‌ಗೆ, ಬರವಣಿಗೆಯಲ್ಲಿ ಆಸಕ್ತಿ ತೊಡಗಿ, ಕೆಲವು ಪತ್ರಿಕೆಗಳಲ್ಲೂ ಕೆಲಸ ಮಾಡಿದ್ದಾರೆ. ಹೀಗೆ ಬರವಣಿಗೆ ಆರಂಭಿಸಿದ ಸಂದೀಪ್‌ಗೆ ಒಳ್ಳೆಯ ವೇದಿಕೆ ಸಿಕ್ಕಿದ್ದು, “ಕಾಮಿಡಿ ಕಿಲಾಡಿ’ಗಳ ಮೂಲಕ. ಜೀ ವಾಹಿನಿಯ “ಕಾಮಿಡಿ ಕಿಲಾಡಿ’ಯ ಬರವಣಿಗೆಯಲ್ಲಿ ಅವಕಾಶ ಸಿಗುವ ಮೂಲಕ ಭಟ್ಟರು ಹಾಗೂ ಜಗ್ಗೇಶ್‌ ಅವರಿಂದ ಮೆಚ್ಚುಗೆಗೆ ಪಾತ್ರರಾದ ಖುಷಿ ಕೂಡಾ ಸಂದೀಪ್‌ಗಿದೆ. “ಕಾಮಿಡಿ ಕಿಲಾಡಿ’, “ಕಿಲಾಡಿ ಕುಟುಂಬ’, “ಡ್ರಾಮಾ ಜೂನಿಯರ್’ನ ಬರಹಗಾರರಾಗಿರುವ ಸಂದೀಪ್‌, “ಶಿವಾನಿ’, “ಮಿಂಚು’ ಸೇರಿದಂತೆ ಕೆಲವು ಧಾರಾವಾಹಿಗಳಿಗೆ ಸಂಭಾಷಣೆ ಕೂಡಾ ಬರೆದಿದ್ದಾರೆ. 

ಸದ್ಯ ಸಂದೀಪ್‌ಗೆ ಸಿನಿಮಾದಿಂದ ಒಂದಷ್ಟು ಅವಕಾಶಗಳು ಬರುತ್ತಿವೆ. ಸದ್ಯ “ಜಾನಿ ಜಾನಿ ಯೆಸ್‌ ಪಪ್ಪಾ’ದ ಸಂಭಾಷಣೆಯಲ್ಲಿ ಬಿಝಿಯಾಗಿರುವ ಸಂದೀಪ್‌, ಕಾಮಿಡಿ ದೃಶ್ಯಗಳಿಗೆ ಸಂಭಾಷಣೆ ಬರೆಯುವುದರಲ್ಲಿ ಎತ್ತಿದ ಕೈ. “ನಾನು ಓದಿರೋದು ಇಂಜಿನಿಯರಿಂಗ್‌. ಆದರೆ, ನನಗೆ ಬರವಣಿಗೆಯಲ್ಲಿ ಆಸಕ್ತಿ ಇತ್ತು. ಹಾಗಾಗಿ, ಪತ್ರಿಕೆಗಳಲ್ಲಿ ಬರೆಯಲಾರಂಭಿಸಿದೆ. ಈಗ ಸಿನಿಮಾ ಹಾಗೂ ಶೋಗಳಲ್ಲಿ ಒಳ್ಳೆಯ ಅವಕಾಶಗಳು ಸಿಗುತ್ತಿವೆ’ ಎನ್ನುವುದು ಸಂದೀಪ್‌ ಮಾತು.

– ರವಿ ರೈ

Advertisement

Udayavani is now on Telegram. Click here to join our channel and stay updated with the latest news.

Next