Advertisement

ಶ್ರೀಗಂಧದ ಮರ, ಗಾಂಜಾ ಸಾಗಿಸುತ್ತಿದ್ದವನ ಬಂಧನ

12:53 PM Oct 17, 2018 | |

ಬೆಂಗಳೂರು: ಅಕ್ರಮವಾಗಿ ಗಾಂಜಾ ಸಾಗಾಟ, ಶ್ರೀಗಂಧದ ಮರ ಸಾಗಿಸುತ್ತಿದ್ದ ತಮಿಳುನಾಡು ಮೂಲದ ಆರೋಪಿಯನ್ನು ಕೆಂಪೇಗೌಡ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ತಮಿಳುನಾಡಿನ ಕೃಷ್ಣಗಿರಿ ಮೂಲದ ಮುರುಗನ್‌(23) ಬಂಧಿತ.

Advertisement

ಆರೋಪಿಯಿಂದ 5 ಕೆ.ಜಿ. ಗಾಂಜಾ, 300 ಕೆ.ಜಿ.ಶ್ರೀಗಂಧದ ಮರದ ತುಂಡುಗಳು, ಒಂದು ಕಾರು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ಹೇಳಿದರು. ಆರೋಪಿ ಕೃಷ್ಣಗಿರಿ ಕಾಡುಗಳಲ್ಲಿ ಶ್ರೀಗಂಧದ ಮರಗಳನ್ನು ಕಡಿದು ಅವುಗಳನ್ನು ತುಂಡುಗಳನ್ನಾಗಿ ಮಾಡಿಕೊಂಡು ನಗರದ ವ್ಯಾಪಾರಿಯೊಬ್ಬರಿಗೆ ಮಾರಾಟ ಮಾಡಲು ತಂದಿದ್ದ.

ಕೇರಳದ ವ್ಯಕ್ತಿಯೊಬ್ಬನಿಂದ ಗಾಂಜಾವನ್ನು ತಂದು ಪೆಡ್ಲರ್‌ವೊಬ್ಬನಿಗೆ ಮಾರಾಟ ಮಾಡಲು ತಂದಿದ್ದ. ಈತನ ಸಂಪರ್ಕದಲ್ಲಿರುವ ಆ ಇಬ್ಬರು ವ್ಯಕ್ತಿಗಳ ಬಗ್ಗೆ ಮಾಹಿತಿ ಕಲೆ ಹಾಕಲಾಗಿದ್ದು, ಆರೋಪಿಗಳನ್ನು ಸದ್ಯದಲ್ಲೇ ಬಂಧಿಸಲಾಗುವುದು ಎಂದು ಪೊಲೀಸರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next