Advertisement

ಪ್ರತಿಭಾನ್ವಿತ ನಟ ಉದಯ್ ಹುತ್ತಿನಗದ್ದೆ ಇನ್ನಿಲ್ಲ

08:27 AM Jun 03, 2022 | Team Udayavani |

ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ನಟರಾಗಿ ಗುರುತಿಸಿಕೊಂಡಿದ್ದ ಉದಯ್‌ ಹುತ್ತಿನಗದ್ದೆ (61) ಅವರು ರಾಜಾಜಿನಗರದ ತಮ್ಮ ನಿವಾಸದಲ್ಲಿ ಗುರುವಾರ ನಿಧನರಾದರು. ಅವರಿಗೆ ಪತ್ನಿ, ನಟಿ ಲಲಿತಾಂಜಲಿ ಮತ್ತು ಇಬ್ಬರು ಪುತ್ರರು ಇದ್ದಾರೆ.

Advertisement

ಚಿಕ್ಕಮಗಳೂರು ಸಮೀಪದ ಬಸರಿಕಟ್ಟೆ ಸಮೀಪದ ಹುತ್ತಿನಗದ್ದೆಯವರಾದ ಉದಯ್ ಅವರು ವೃತ್ತಿಪರ ಛಾಯಾಗ್ರಾಹಕರಾಗಿದ್ದರು. 1980ರ ದಶಕದ ಕೊನೆಯಲ್ಲಿ ‘ಆರಂಭ’, ‘ಕ್ರಮ’, ‘ಉಂಡೂ ಹೋದ ಕೊಂಡೂ ಹೋದ’, ‘ಶಿವಯೋಗಿ ಅಕ್ಕಮಹಾದೇವಿ’, ‘ಅಮೃತಬಿಂದು’, ‘ಉದ್ಭವ’ ಚಿತ್ರಗಳಲ್ಲಿ ಅಭಿನಯಿಸಿ ಖ್ಯಾತರಾಗಿದ್ದರು.

ಖ್ಯಾತ ನಟರಾದ ಡಾ.ರಾಜ್ ಕುಮಾರ್, ವಿಷ್ಣುವರ್ಧನ್, ಅನಂತನಾಗ್ ಮುಂತಾದವರ ಜೊತೆಗೆ ಉದಯ್ ತೆರೆ ಹಂಚಿಕೊಂಡಿದ್ದರು. ಆರಂಭ ಚಿತ್ರದ ಮೂಲಕ ನಿರ್ಮಾಪಕರಾಗಿದ್ದರು.

ಇದನ್ನೂ ಓದಿ:ಕುಕ್ಕೆ ಸಮೀಪದ ಅರಣ್ಯ ನಡುವಿನ ಹೆದ್ದಾರಿ ಚಿತ್ರ ಹಂಚಿಕೊಂಡ ಆನಂದ್‌ ಮಹೀಂದ್ರಾ

ನವರಂಗ್‌ ವೃತ್ತದ ಬಳಿ ಛಾಯಾಗ್ರಹಣ ಸ್ಟುಡಿಯೋ ಹೊಂದಿದ್ದ ಉದಯ್ ಹುತ್ತಿನಗದ್ದೆ, ಆನಂದರಾವ್‌ ವೃತ್ತದ ಬಳಿ ಉದಯ್ ಕಲರ್‌ಲ್ಯಾಬ್‌ ನಡೆಸುತ್ತಿದ್ದರು.

Advertisement

ಇತ್ತೀಚೆಗೆ ಅವರು ನರಸಂಬಂಧಿ ಸಮಸ್ಯೆ ಮತ್ತು ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದರು.

ಪಾರ್ಥೀವ ಶರೀರವನ್ನು ರಾಜಾಜಿನಗರದ ಅವರ ನಿವಾಸದಲ್ಲಿ ಇರಿಸಲಾಗಿದೆ. ಶುಕ್ರವಾರ ಮಧ್ಯಾಹ್ನ 2 ಗಂಟೆಗೆ ಚಾಮರಾಜಪೇಟೆಯ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಅವರ ಪುತ್ರ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next