Advertisement

ನಟ ಸುದೀಪ್‌ ವಿರುದ್ಧದ ಕೇಸ್‌ ಹೈಕೋರ್ಟಲ್ಲಿ ವಜಾ

10:05 AM Feb 16, 2020 | sudhir |

ಚಿಕ್ಕಮಗಳೂರು: ನಟ ಸುದೀಪ್‌ ಮಾಲಕತ್ವದ “ಕಿಚ್ಚ ಕ್ರಿಯೇಷನ್ಸ್‌’ ವಿರುದ್ಧದ ಪ್ರಕರಣವನ್ನು ಹೈಕೋರ್ಟ್‌ ವಜಾಗೊಳಿಸಿದೆ.

Advertisement

ಚಿಕ್ಕಮಗಳೂರು ತಾಲೂಕಿನ ಆಲ್ದೂರು ವ್ಯಾಪ್ತಿಯ ಬೈಗೂರಿನಲ್ಲಿ ದೀಪಕ್‌ ಮಯೂರ್‌ ಪಾಟೀಲ್‌ ಮಾಲಕತ್ವದ ದೊಡ್ಮನೆ ಎಸ್ಟೇಟ್‌ನಲ್ಲಿ 2014ರಲ್ಲಿ 30 ದಿನಗಳ ಕಾಲ “ವಾರಸ್ದಾರ’ ಧಾರಾವಾಹಿಯ ಚಿತ್ರೀಕರಣ ನಡೆಸಲಾಗಿತ್ತು. ಈ ಚಿತ್ರೀಕರಣದ ವೇಳೆ ಕಾಫಿ ತೋಟ, ಅಡಿಕೆ ಮರಗಳನ್ನು ಕಡಿದು ನಾಶ ಮಾಡಲಾಗಿದೆ ಮತ್ತು ಬಾಡಿಗೆ ಬಾಕಿ ಹಣ ನೀಡಿಲ್ಲವೆಂದು ಕಾಫಿ ತೋಟದ ಮಾಲಕರು ನಟ ಸುದೀಪ್‌ ವಿರುದ್ಧ ಆಲ್ದೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಈ ಪ್ರಕರಣ ಹೈಕೋರ್ಟ್‌ ಮೇಟ್ಟಿಲೇರಿತ್ತು.

ವಿಚಾರಣೆ ನಡೆಸಿದ ನ್ಯಾಯಾಲಯ ಪ್ರಕರಣ ವಜಾಗೊಳಿಸಿದೆ ಎಂದು ಸುದೀಪ್‌ ಪರ ವಕೀಲ ಗೋಪಿ ಪ್ರಕಾಶ್‌ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next