Advertisement

Sandalwood: ಸಣ್ಣ ವಯಸ್ಸಿನಲ್ಲೇ ಇಹಲೋಕ ತ್ಯಜಿಸಿದ ಸ್ಯಾಂಡಲ್‌ ವುಡ್‌ ನಟ, ನಿರ್ದೇಶಕ

10:05 AM Apr 24, 2023 | Team Udayavani |

ಬೆಂಗಳೂರು: ನಿನ್ನೆಯಷ್ಟೇ ನಟ ಸಂಪತ್‌ ಜಯರಾಮ್‌ ನಿಧನದ ಸುದ್ದಿಯನ್ನು ಕೇಳಿ ಶಾಕ್‌ ನಲ್ಲಿದ್ದ ಚಂದನವನಕ್ಕೆ ಇದೀಗ ಮತ್ತೊಬ್ಬ ನಟ, ನಿರ್ದೇಶಕನ ನಿಧನದ ಸುದ್ದಿ ಆಘಾತವನ್ನು ನೀಡಿದೆ. ಚಂದನವನದ ನಟ, ನಿರ್ದೇಶಕರೊಬ್ಬರು ಸಣ್ಣ ವಯಸ್ಸಿನಲ್ಲೇ ಇಹಲೋಕ ತ್ಯಜಿಸಿದ್ದಾರೆ.

Advertisement

ಸ್ಯಾಂಡಲ್‌ ವುಡ್‌ ನಲ್ಲಿ ಪೋಷಕ ಪಾತ್ರಗಳಲ್ಲಿ ನಟಿಸಿ, ಸಿನಿಮಾ ನಿರ್ದೇಶಕನಾಗಿಯೂ ಗುರುತಿಸಿಕೊಂಡಿದ್ದ ಟಪೋರಿ ಸತ್ಯ (46) ಬೆಂಗಳೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಫಲಿಸದೆ ನಿಧನರಾಗಿದ್ದಾರೆ.

ಕಳೆದ ಕೆಲ ದಿನಗಳಿಂದ ಶ್ವಾಸಕೋಶದ ಸಮಸ್ಯೆಯಿಂದ ಬಳಲುತ್ತಿದ್ದ ಟಪೋರಿ ಸತ್ಯ, ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಭಾನುವಾರ ರಾತ್ರಿ ನಿಧನರಾಗಿದ್ದಾರೆ.

ಇದನ್ನೂ ಓದಿ: ಶಿವಮೊಗ್ಗ: ನಿವೃತ್ತ ಡಿಸಿಎಫ್ ಹಾಗೂ‌ ಹೊಳಲ್ಕೆರೆ ತಹಶೀಲ್ದಾರ್ ಗೆ ಲೋಕಾಯುಕ್ತ ಶಾಕ್

ಲೂಸ್‌ ಮಾಸ ಯೋಗಿ ಅಭಿನಯದ ʼನಂದ ಲವ್ಸ್‌ ನಂದಿತಾʼ ಚಿತ್ರದಲ್ಲಿ ʼಕ್ವಾಟ್ರುʼ ಎಂಬ ಪಾತ್ರದಲ್ಲಿ ನಟಿಸಿ ಅವರು ಗಮನ ಸೆಳೆದಿದ್ದರು. 30 ಕ್ಕೂ ಹೆಚ್ಚಿನ ಸಿನಿಮಾಗಳಲ್ಲಿ ಪೋಷಕ ಪಾತ್ರಗಳಲ್ಲಿ ನಟಿಸಿ ಚಂದನವನದಲ್ಲಿ ಕಲಾವಿದನಾಗಿ ಗುರುತಿಸಿಕೊಂಡಿದ್ದ ಅವರು ʼಮೇಳʼ ಎಂಬ ಸಿನಿಮಾವನ್ನು ನಿರ್ದೇಶನ ಮಾಡಿದ್ದರು. ಇನ್ನೇನು ಹೊಸ ಚಿತ್ರ ಮಾಡುವ ತಯಾರಿಯಲ್ಲಿದ್ದ ಅವರು ಇದಕ್ಕಾಗಿ ಅಡಿಷನ್‌ ನಡೆಸುತ್ತಿದ್ದರು.

Advertisement

ಪತ್ನಿ ಮತ್ತು ಮಕ್ಕಳನ್ನು ಸತ್ಯ ಅಗಲಿದ್ದಾರೆ. ಅವರ ಹಠಾತ್‌ ನಿಧನಕ್ಕೆ ಅನೇಕರು ಕಂಬನಿ ಮಿಡಿದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next