Advertisement

ಶ್ರೀಗಂಧ ಸಾಗಾಟ: ಇಬ್ಬರ ಸೆರೆ

02:35 PM Feb 12, 2021 | Team Udayavani |

ಬೆಳಗಾವಿ: ಶ್ರೀಗಂಧದ ಕಟ್ಟಿಗೆ ತುಂಡುಗಳನ್ನು ಕತ್ತರಿಸಿಕೊಂಡು ಮಾರಾಟ ಮಾಡಲು ಯತ್ನಿಸುತ್ತಿದ್ದ ಇಬ್ಬರನ್ನು ಬಂಧಿಸಿ 22 ಕೆ.ಜಿ. ಶ್ರೀಗಂಧ ಕಟ್ಟಿಗೆಯನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.

Advertisement

ರಾಯಬಾಗ ತಾಲೂಕಿನ ಖನದಾಳ ಗ್ರಾಮದ ಮಲ್ಲಿಕಾರ್ಜುನ ಸದಾಶಿವ ಭಜಂತ್ರಿ ಹಾಗೂ ಮಾರುತಿ ಬಾಬು ಚಿಗರಿ ಎಂಬಾತರನ್ನು ಬಂಧಿಸಿ 68 ಸಾವಿರ ರೂ. ಮೌಲ್ಯದ 22 ಕೆ.ಜಿ. ಶ್ರೀಗಂಧದ ತುಂಡುಗಳು, ದ್ವಿಚಕ್ರ ವಾಹನ ಸೇರಿದಂತೆ ಇತರೆ ವಸ್ತುಗಳನ್ನು ಅರಣ್ಯ ಸಂಚಾರಿ ದಳದ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ರಾಯಬಾಗ ತಾಲೂಕಿನ ಇಟ್ನಾಳ ಗ್ರಾಮದ ಕಡೆಯಿಂದ ಮುಗಳಖೋಡ ಕಡೆಗೆ ದ್ವಿಚಕ್ರ ವಾಹನದ ಮೇಲೆ ಶ್ರೀಗಂಧ ತುಂಡುಗಳೊಂದಿಗೆ ಈ ಇಬ್ಬರು ಹೊರಟಿದ್ದರು. ಮಾಹಿತಿ ಪಡೆದ ಪಿಎಸ್‌ಐ ರೋಹಿಣಿ ಪಾಟೀಲ, ಸಿಬ್ಬಂದಿಗಳಾದ ಎಸ್‌.ಆರ್‌. ಅರಿಬೆಂಚಿ, ಕೆ.ಡಿ. ಹಿರೇಮಠ ದಾಳಿ ನಡೆಸಿದ್ದಾರೆ. ಹಾರೂಗೇರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next