Advertisement

ಇನ್ಸುಲೇಟರ್‌ನಲ್ಲಿ ಮರಳು ಸಾಗಾಟ: 7 ಮಂದಿ ಸೆರೆ

02:20 AM Mar 26, 2019 | sudhir |

ಕುಂದಾಪುರ: ಮೀನು ಸಾಗಾಟದ ಇನ್ಸುಲೇಟರ್‌ ವಾಹನದಲ್ಲಿ ಮರಳು ಸಾಗಿಸುತ್ತಿದ್ದ ತಂಡವನ್ನು ಸೋಮವಾರ ಬೆಳಗ್ಗೆ ಕೋಟೇಶ್ವರ ಸಮೀಪದ ಬೀಜಾಡಿಯಲ್ಲಿ ಪತ್ತೆ ಹಚ್ಚಿದ ಪೊಲೀಸರು, 7 ಮಂದಿಯನ್ನು ಬಂಧಿಸಿ ವಾಹನವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

Advertisement

ಚಾಲಕ ಮಂಜೇಶ್ವರ ಪಾವೂರಿನ ಅಬ್ದುಲ್‌ ಸತ್ತಾರ್‌ (23), ನೌಶಾದ್‌ ಅಲಿ (21), ಬ್ರಹ್ಮಾವರ ವಾರಂಬಳ್ಳಿ ನಿವಾಸಿಗಳಾದ ಕೊಪ್ಪಳ ಮೂಲದ ಮಂಜುನಾಥ್‌ ದಮ್ಮೂರ್‌ (19), ಶ್ರೀಕಾಂತ್‌ (28), ಶರಣಪ್ಪ (19), ಬಿಜೈಯ ರಾಜೇಶ್‌ ಶೆಟ್ಟಿ (40), ಸುರತ್ಕಲ್‌ ಕುಳಾಯಿ ನಿವಾಸಿ ಸುಕೇಶ್‌ ಕೋಟ್ಯಾನ್‌ (34) ಬಂಧಿತರು.
ಎಸ್‌ಐ ಹರೀಶ್‌ ಆರ್‌. ನೇತೃತ್ವದ ಪೊಲೀಸರ ತಂಡ ಬೀಜಾಡಿಯ ಹೆದ್ದಾರಿಯಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದಾಗ ಇನ್ನೋವಾ ಕಾರು ಹಾಗೂ ಇನ್ಸುಲೇಟರ್‌ ವಾಹನವನ್ನು ನಿಲ್ಲಿಸಲು ಸೂಚಿಸಿದರು. ಆಗ ವಾಹನದಲ್ಲಿದ್ದವರು ಸ್ವಲ್ಪ ದೂರ ಸಂಚರಿಸಿ, ವಾಹನ ನಿಲ್ಲಿಸಿ ಪರಾರಿಯಾಗಲು ಯತ್ನಿಸಿದ್ದರು. ಕೂಡಲೇ ಅವರನ್ನು ಸುತ್ತುವರಿದ ಪೊಲೀಸರು ವಿಚಾರಿಸಿ ದಾಗ, ಬೆಂಗಾವಲು ವಾಹನ ಇಟ್ಟುಕೊಂಡು ಮರಳು ತುಂಬಿಸಿ ಬಿ.ಸಿ. ರೋಡ್‌ನಿಂದ ಬೀಜಾಡಿಗೆ ಸಾಗಿಸುತ್ತಿರುವುದಾಗಿ ತಿಳಿಸಿದ್ದಾರೆ.

ಇನ್ಸುಲೇಟರ್‌ ವಾಹನ ಹಾಗೂ ಇನ್ನೋವಾ ಕಾರನ್ನು ವಶಪಡಿಸಿ ಕೊಳ್ಳಲಾಗಿದೆ. ಮಂಗಳೂರಿನಿಂದ ದುಪ್ಪಟ್ಟು ಹಣಕ್ಕೆ ಮರಳನ್ನು ಸಾಗಿಸಲಾಗುತ್ತಿದ್ದು, ಹಲವು ತಿಂಗಳಿಂದ ಈ ಜಾಲ ಸಕ್ರಿಯವಾಗಿ ಕಾರ್ಯಾಚರಿಸುತ್ತಿದೆ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next