Advertisement

ಇನ್ನು 8 ದಿನಗಳಲ್ಲಿ ಮರಳುಗಾರಿಕೆ ಸ್ಥಗಿತ

10:21 AM May 24, 2020 | sudhir |

ಉಡುಪಿ: ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಸ್ಥಗಿತಗೊಂಡ ಕಟ್ಟಡ ಕಾಮಗಾರಿ ಪ್ರಾರಂಭವಾಗಿದ್ದು, ಪ್ರಸ್ತುತ ಜಿಲ್ಲೆಯ ಇ-ಸ್ಯಾಂಡ್‌ ಬಜಾರ್‌ನಲ್ಲಿ ಬೇಡಿಕೆ ತಕ್ಕಂತೆ ಮರಳು ಲಭ್ಯವಾಗದ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ನಿರ್ಮಾಣ ಕಾಮಗಾರಿ ನಿಂತು ಹೋಗುವ ಭೀತಿ ಎದುರಾಗಿದೆ.

Advertisement

ಜಿಲ್ಲೆಯ ಸಿಆರ್‌ಝಡ್‌ ವ್ಯಾಪ್ತಿಯಲ್ಲಿ 22 ಕಡೆಗಳಲ್ಲಿ ಮರಳು ದಿಬ್ಬಗಳ ತೆರವಿಗೆ ಅವಕಾಶ ನೀಡಲಾಗಿದೆ. ಸುಮಾರು 80 ಮಂದಿಗೆ ತಾತ್ಕಾಲಿಕ ಪರವಾನಿಗೆ ನೀಡಲಾಗಿದೆ. ಅವರಲ್ಲಿ ಕೇವಲ 8 ಮಂದಿ ಮರಳು ತೆರವು ಕಾರ್ಯದಲ್ಲಿ ತೊಡಗಿದ್ದು, ಮೇ 8ರಿಂದ 24ರ ವರೆಗೆ ಸುಮಾರು 1,785 ಮೆ. ಟನ್‌ ಮರಳು ತೆಗೆದು ವಿತರಿಸಲಾಗಿದೆ.

ಕಾರ್ಮಿಕರ ಕೊರತೆ
ತಾತ್ಕಾಲಿಕ ಪರವಾನಿಗೆದಾರರಿಗೆ ಕಾರ್ಮಿಕರ ಕೊರತೆ ಎದುರಾಗಿದೆ. ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಅವರೆಲ್ಲರೂ ತವರಿಗೆ ತೆರಳಿರುವುದರಿಂದ 7 ದಕ್ಕೆಗಳಲ್ಲಿ ಮಾತ್ರ ಮರಳು ದಿಬ್ಬ ತೆರವು ಮಾಡಲಾಗುತ್ತಿದೆ. ಇದರಿಂದಾಗಿ ಜನರ ಬೇಡಿಕೆ ತಕ್ಕಂತೆ ಮರಳು ಪೂರೈಕೆಯಾಗುತ್ತಿಲ್ಲ. ಈ ಕಾರಣ ಇ-ಸ್ಯಾಂಡ್‌ ಬಜಾರ್‌ನಲ್ಲಿ ಮುಂದಿನ 10 ದಿನಗಳ ಬಳಿಕ ಮರಳು ಬುಕ್ಕಿಂಗ್‌ಗೆ ಅವಕಾಶ ಕಲ್ಪಿಸಲಾಗುತ್ತದೆ.

4.33 ಲ. ಮೆ. ಟನ್‌ ಮರಳು ವಿತರಣೆ
2018-19ರಲ್ಲಿ ಸಿಆರ್‌ಝಡ್‌ ವ್ಯಾಪ್ತಿಯಲ್ಲಿ 1.12 ಲ. ಮೆ. ಟನ್‌ ಮತ್ತು ನಾನ್‌ ಸಿಆರ್‌ಝಡ್‌ನ‌ಲ್ಲಿ 9,830.78 ಮೆ. ಟನ್‌ ಸೇರಿದಂತೆ ಒಟ್ಟು 1.24 ಲ. ಮೆ. ಟನ್‌; 2019-20ರಲ್ಲಿ ಸಿಆರ್‌ಝಡ್‌ನ‌ಲ್ಲಿ 3.11 ಲ. ಮೆ. ಟನ್‌, ನಾನ್‌ ಸಿಆರ್‌ಝಡ್‌ನ‌ಲ್ಲಿ 1.71 ಲ. ಮೆ. ಟನ್‌ ಸೇರಿದಂತೆ ಒಟ್ಟು 4.33 ಲ. ಮೆ. ಟನ್‌ ಮರಳು ತೆಗೆಯಲಾಗಿದೆ.

ಜೂ.1ರಿಂದ ಮರಳುಗಾರಿಕೆ ಸ್ಥಗಿತ
ಮಳೆಗಾಲದಲ್ಲಿ ಮೀನುಗಳು ಸಂತಾನೋತ್ಪತ್ತಿ ಮಾಡುವುದರಿಂದ ಕಾನೂನಿನ ಅನ್ವಯ ಜೂ. 1ರಿಂದ ಮರಳು ದಿಬ್ಬ ತೆರವು ಗೊಳಿಸುವ ಕಾರ್ಯ ಸ್ಥಗಿತಗೊಳ್ಳಲಿದೆ.

Advertisement

ಬೇಡಿಕೆ ಹೆಚ್ಚಿದೆ!
ಕಾರ್ಮಿಕರ ಕೊರತೆ ಇರುವ ಕಾರಣ ಕೃತಕ ಮರಳಿನ ಅಭಾವ ಎದುರಾಗಿದೆ. ಉಡುಪಿ -ಸ್ಯಾಂಡ್‌ ಬಜಾರ್‌ನಲ್ಲಿ ಮರಳಿಗೆ ಭಾರೀ ಪ್ರಮಾಣದ ಬೇಡಿಕೆ ಇದೆ. ಮುಟ್ಟುಗೋಲು ಹಾಕಲಾದ ಮರಳು ಸಂಗ್ರಹವಿದೆ. ಅಗತ್ಯವಿದ್ದರೆ ಕೋರ್ಟ್‌ ನಿಂದ ಅನುಮತಿ ಪಡೆದು ವಿತರಿಸಲಾಗುತ್ತದೆ ಎಂದು ಗಣಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next