Advertisement

ಮರಳು ಸಾಗಾಣಿಕೆ ನಿಯಮ ಪಾಲಿಸಿ

06:44 PM Feb 05, 2021 | Team Udayavani |

ಬಾದಾಮಿ: ತಾಲೂಕಿನ ಎಲ್ಲ ಮರಳು ಗಣಿಗಾರಿಕೆ ಮಾಲೀಕರು ಕಾನೂನಿನ ಪ್ರಕಾರ ಗಣಿಗಾರಿಕೆ ಮತ್ತು ಮರಳು ಸಾಗಾಣಿಕೆ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ತಹಶೀಲ್ದಾರ್‌ ಸುಹಾಸ ಇಂಗಳೆ ಹೇಳಿದರು.

Advertisement

ಪಟ್ಟಣದ ತಹಶೀಲ್ದಾರ್‌ ಕಚೇರಿಯಲ್ಲಿ ನಡೆದ ತಾಲೂಕು ಮಟ್ಟದ ಟಾಸ್ಕ್ಪೋರ್ಸ್‌ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಪ್ರತಿ ತಿಂಗಳಿನ ಮೊದಲ ವಾರದಲ್ಲಿ ತಾಲೂಕಿನ ಟಾಸ್ಕ್ಪೋರ್ಸ್‌ ಸಮಿತಿ ಸಭೆ ನಡೆಸಲಾಗುವುದು. ಸದರಿ  ಸಭೆಗೆ ಕಡ್ಡಾಯವಾಗಿ ಹಾಜರಾಗಲು ಸೂಚಿಸಲಾಯಿತು.

ಇದನ್ನೂ ಓದಿ :ಸೂಕಿ ಯಶೋಗಾಥೆ; ಮ್ಯಾನ್ಮಾರ್ ಪ್ರಜಾಪ್ರಭುತ್ವದ ಐಕಾನ್, ರಾಜಕೀಯ ಕೈದಿ ಟು ನಾಯಕಿ

ಸಿಪಿಐ ರಮೇಶ ಹಾನಾಪುರ, ಪ್ರಕಾಶ ಬಣಕಾರ ಹಾಗೂ ಜಿಲ್ಲಾ ಗಣಿ -ಭೂವಿಜ್ಞಾನ ಇಲಾಖೆ ಅ ಧಿಕಾರಿಗಳು, ಲೋಕೋಪಯೋಗಿ   ಇಲಾಖೆ, ಅರಣ್ಯ ಇಲಾಖೆಯ ಅಧಿ ಕಾರಿಗಳು ಹಾಗೂ ಪಾಯಿಂಟ್‌ ಮಾಲೀಕರು ಸಭೆಯಲ್ಲಿ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next