Advertisement

ಸಂಪ್ಯ ಅಪಘಾತ: ಸಿಸಿ ಟಿವಿ ದೃಶ್ಯ ಪರಿಶೀಲಿಸಿ ಕ್ರಮ

09:54 PM Mar 07, 2023 | Team Udayavani |

ಪುತ್ತೂರು: ಆರ್ಯಾಪು ಗ್ರಾಮದ ಸಂಪ್ಯ ಮಸೀದಿ ಬಳಿ ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿ ರಸ್ತೆಯಲ್ಲಿ ರವಿವಾರ ರಾತ್ರಿ ಪೊಲೀಸ್‌ ಜೀಪು ಹಾಗೂ ಬೈಕ್‌ ನಡುವೆ ಸಂಭವಿಸಿದ ಅಪಘಾತ ಪ್ರಕರಣದಲ್ಲಿ ಮೃತರ ಸಹೋದರ ನೀಡಿದ ದೂರಿನಂತೆ ಸಂಪ್ಯ ಠಾಣೆಯಲ್ಲಿ ದೂರು ದಾಖಲಾಗಿದೆ. ಅಪಘಾತದ ಪರಿಣಾಮ ಗಾಯಾಳು ಪಾಣಾಜೆ ಸಿಎ ಬ್ಯಾಂಕ್‌ ಸಿಇಒ ಲಕ್ಷ್ಮಣ ನಾಯ್ಕ ಮೃತಪಟ್ಟಿದ್ದು ಈ ಅಪಘಾತದ ಬಗ್ಗೆ ಸರಿಯಾದ ಮಾಹಿತಿಯನ್ನು ಸೂಕ್ತ ತನಿಖೆ (ಆ ಭಾಗದ ಸಿಸಿ ಟಿವಿ ಫ‌ುಟೇಜ್‌) ನಡೆಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ತಿಳಿಸಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next