Advertisement

Video: ಪ್ರಯಾಣಿಕರೇ ಗಮನಿಸಿ… ಬಸ್ಸಿನ ಬಾಗಿಲ ಬಳಿ ನಿಲ್ಲುವಾಗ ಇರಲಿ ಎಚ್ಚರ, ತಪ್ಪಿದರೆ…

03:31 PM Jul 04, 2024 | Team Udayavani |

ತಮಿಳುನಾಡು: ಬಸ್ಸಿನ ಬಾಗಿಲ ಬಳಿ ನಿಂತು ಪ್ರಯಾಣಿಸುವಾಗ ಎಷ್ಟು ಎಚ್ಚರವಾಗಿದ್ದರೂ ಕಮ್ಮಿಯೇ, ಅದರಲ್ಲಿ ಇಲ್ಲೊಬ್ಬರು ಮಹಿಳೆ ಬಸ್ಸಿನಲ್ಲಿ ಪ್ರಯಾಣಿಸುವ ವೇಳೆ ಬಸ್ಸಿನಿಂದ ಹೊರಗೆಸೆಯಲ್ಪಟ್ಟು ಗಂಭೀರ ಗಾಯಗೊಂಡಿದ್ದಾರೆ.

Advertisement

ಅಂದಹಾಗೆ ಘಟನೆ ನಡೆದಿರುವುದು ತಮಿಳುನಾಡಿನ ನಾಮಕ್ಕಲ್‌ನಲ್ಲಿ, ಚಲಿಸುತ್ತಿದ್ದ ಬಸ್ಸು ಒಮ್ಮೆಲೇ ತಿರುವು ತೆಗೆದುಕೊಂಡಿದೆ ಈ ವೇಳೆ ಬಾಗಿಲಿನ ಎದುರು ಬದಿ ನಿಂತ್ತಿದ್ದ ಮಹಿಳೆಯೊಬ್ಬರು ಬಸ್‌ನಿಂದ ಕೆಳಗೆ ಎಸೆಯಲ್ಪಟ್ಟು ಗಾಯಗೊಂಡು ಪವಾಡ ಸದೃಶ ರೀತಿಯಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಘಟನೆಯ ದೃಶ್ಯ ಬಸ್ಸಿನಲ್ಲಿ ಅಳವಡಿಸಿದ್ದ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ, ಗಾಯಗೊಂಡಿರುವ ಮಹಿಳೆಯನ್ನು ಶಾರದಾ ಎನ್ನಲಾಗಿದ್ದು, ಬಟ್ಟೆ ಖರೀದಿಸಲು ಸೇಲಂ ಗೆ ತೆರಳಿ ಬಸ್ಸಿನಲ್ಲಿ ವಾಪಸ್ಸಾಗುತ್ತಿದ್ದರು ಎನ್ನಲಾಗಿದೆ, ಬಸ್ಸಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಕರು ಇದ್ದ ಪರಿಣಾಮ ಸೀಟ್ ಸಿಗದೆ ನಿಂತು ಪ್ರಯಾಣ ಮಾಡಿದ್ದಾರೆ. ಈ ವೇಳೆ ಬಸ್ಸು ತಿರುವಿನಲ್ಲಿ ವೇಗವಾಗಿ ಪ್ರಯಾಣಿಸಿದ ಪರಿಣಾಮ ಬಸ್ಸಿನ ಒಳಗಿದ್ದ ಮಹಿಳೆ ಹೊರಗೆಸೆಯಲ್ಪಟ್ಟಿದ್ದಾರೆ, ಮಹಿಳೆ ಬಸ್ಸಿನಿಂದ ಹೊರಬೀಳುತ್ತಿದ್ದಂತೆ ಬಸ್ ಚಾಲಕ ಬಸ್ಸನ್ನು ನಿಲ್ಲಿಸಿದ್ದಾನೆ ಬಳಿಕ ಗಾಯಗೊಂಡಿರುವ ಮಹಿಳೆಯನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದ್ದಾರೆ. ಸದ್ಯ ಮಹಿಳೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಯಾರೇ ಆಗಲಿ ಬಸ್ಸಿನಲ್ಲಿ ಅಥವಾ ಇನ್ನಾವುದೇ ವಾಹನವಾಗಲಿ ಪ್ರಯಾಣ ಮಾಡುವಾಗ ಎಚ್ಚರಿಕೆ ಅಗತ್ಯ.

Advertisement
Advertisement

Udayavani is now on Telegram. Click here to join our channel and stay updated with the latest news.

Next