Advertisement

ಛಗನ್‌ ಅವರಂತೆ ನನಗೂ ಜಾಮೀನು ಕೊಡಿ: ಸಮೀರ್‌ ಭುಜಬಲ್‌

05:00 PM May 15, 2018 | udayavani editorial |

ಮುಂಬಯಿ :  ಅಧಿಕಾರ ದುರುಪಯೋಗಿಸಿಕೊಂಡು ಹಣಕಾಸು ಅಕ್ರಮ ನಡೆಸಿದ ಆರೋಪದಲ್ಲಿ ಜೈಲುಪಾಲಾಗಿರುವ ಸಮೀರ್‌ ಭುಜಬಲ್‌, ತನ್ನಂತೆ ಜೈಲು ಪಾಲಾಗಿದ್ದ ಹಾಗೂ  ಕಳೆದ ಮೇ 4ರಂದು ಜಾಮೀನು ಪಡೆದಿರುವ ತನ್ನ ಚಿಕ್ಕಪ್ಪ, ಹಿರಿಯ ಎನ್‌ಸಿಪಿ ನಾಯಕ ಛಗನ್‌ ಭುಜಬಲ್‌ ಅವರ ಪೂರ್ವ ನಿದರ್ಶನದಲ್ಲಿ ತನಗೂ ಮಧ್ಯಾವಧಿ ಜಾಮೀನು ಮಂಜೂರು ಮಾಡುವಂತೆ ಕೋರಿ ಬಾಂಬೆ ಹೈಕೋರ್ಟಿಗೆ ಅರ್ಜಿ ಸಲ್ಲಿಸಿದ್ದಾರೆ.

Advertisement

ಛಗನ್‌ ಭುಜಬಲ್‌ ಮತ್ತು ಸಮೀರ್‌ ಭುಜಬಲ್‌ ಅವರು ತಮ್ಮ ಹುದ್ದೆಯನ್ನು ದುರುಪಯೋಗಿಸಿಕೊಂಡು ಹಣಕಾಸು ಅಕ್ರಮ ಎಸಗಿ ರಾಜ್ಯ ಸರಕಾರದ ಬೊಕ್ಕಸಕ್ಕೆ ಅಪಾರ ನಷ್ಟ ಉಂಟುಮಾಡಿರುವರೆಂಬ ಆರೋಪದಲ್ಲಿ ಜಾರಿ ನಿರ್ದೇಶನಲಾಯ ಅವರನ್ನು 2016ರಲ್ಲಿ  ಬಂಧಿಸಿತ್ತು.

ಪ್ರಕರಣದ ಮುಖ್ಯ ಆರೋಪಿಯಾಗಿರುವ ತನ್ನ ಚಿಕ್ಕಪ್ಪ ಛಗನ್‌ ಭುಜಬಲ್‌ ಅವರಿಗೆ ನ್ಯಾಯಾಲಯ ಜಾಮೀನು ಮಂಜೂರು ಮಾಡಿರುವ ಪೂರ್ವ ನಿದರ್ಶನದಲ್ಲಿ ತನಗೂ ತಾತ್ಕಾಲಿಕ ಜಾಮೀನು ಮಂಜೂರು ಮಾಡುವಂತೆ ಕೋರಿರುವ ಸಮೀರ್‌ ಭುಜಬಲ್‌ ಅವರ ಅರ್ಜಿಯನ್ನು ಹೈಕೋರ್ಟಿನ ರಜಾಕಾಲದ ನ್ಯಾಯ ಪೀಠದ ಮುಂದೆ ಸಲ್ಲಿಸಲಾಗಿದೆ ಎಂದು ಸಮೀರ್‌ ಅವರ ವಕೀಲ ವಿಕ್ರಮ ಚೌಧರಿ ಮಾಧ್ಯಮಕ್ಕೆ ತಿಳಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next