Advertisement

Sandalwood: ಸಮಯದ ಹಿಂದೆ ಸವಾರಿ ಟ್ರೇಲರ್‌ ರಿಲೀಸ್‌

10:00 AM Jun 04, 2024 | Team Udayavani |

“ಸಮಯ’ ಎಂಬ ಸಿನಿಮಾವೊಂದು ಬಿಡುಗಡೆಯ ಹಂತಕ್ಕೆ ಬಂದಿದ್ದು, ಇತ್ತೀಚೆಗೆ ಚಿತ್ರದ ಟ್ರೇಲರ್‌ ಬಿಡುಗಡೆಯಾಗಿದೆ. ಎಸ್‌. ಆರ್‌.ಪ್ರಮೋದ್‌ ಈ ಸಿನಿಮಾವನ್ನು ನಿರ್ದೇಶಿಸಿ, ನಟಿಸಿದ್ದಾರೆ.

Advertisement

ಚಿತ್ರದ ಬಗ್ಗೆ ಮಾತನಾಡಿದ ಅವರು, ಇದೊಂದು ತಂದೆ ಮಗನ ನಡುವಿನ ಬಾಂಧವ್ಯವನ್ನು ಹೇಳಲಿದೆ. ಅಪ್ಪನಾದವನು ಕಷ್ಟಪಟ್ಟು, ಸಾಲ ತೆಗೆದುಕೊಂಡು, ಸರ್ವಸ್ವವನ್ನು ತ್ಯಾಗ ಮಾಡಿ, ಪುತ್ರನ ವಿದ್ಯಾಭ್ಯಾಸ ಮಾಡಿಸಲು ಮುಂದಾಗುತ್ತಾರೆ. ಆದರೆ ಪುಂಡ ಮಗ ಓದದೇ ಕುಟುಂಬದ ನೆಮ್ಮದಿ ಹಾಳು ಮಾಡುತ್ತಾನೆ. ಈ ಅಂಶಗಳೊಂದಿಗೆ ಸಿನಿಮಾ ಮೂಡಿಬಂದಿದೆ ಎಂದರು. ಪ್ರಮೋದ್‌ ಪಿಕ್ಚರ್ಸ್‌ ಬ್ಯಾನರ್‌ನಲ್ಲಿ ಈ ಚಿತ್ರ ನಿರ್ಮಾಣವಾಗಿದೆ. ಚಿತ್ರದಲ್ಲಿ ನವಪ್ರತಿಭೆ ರಮ್ಯ ನಾಯಕಿ. ಉಳಿದಂತೆ ಭೀಮಣ್ಣ ನಾಯ್ಕ್, ಕಿಟ್ಟಿ, ಚಂದ್ರಶೇಖರ್‌, ಮಂಜು ಮಡಬ, ಬನ್ನೂರು ರಂಗಸ್ವಾಮಿ ಮುಂತಾದವರು ಬಣ್ಣ ಹಚ್ಚಿದ್ದಾರೆ. ಮಲ್ಲೇಶ್‌.ಪಿ.ವಿಜ್ಜು ಸಾಹಿತ್ಯದ ಎರಡು ಹಾಡುಗಳಿಗೆ ಕೆವಿನ್‌ ಸಂಗೀತ ಸಂಯೋಜಿಸಿದ್ದಾರೆ. ಸೆನ್ಸಾರ್‌ ನಿಂದ ಪ್ರಶಂಸೆ ಪಡೆದುಕೊಂಡು ‘ಯು/ಎ’ ಪ್ರಮಾಣಪತ್ರ ಹೊಂದಿರುವ ಚಿತ್ರವು ಮುಂದಿನ ತಿಂಗಳು ತೆರೆ ಕಾಣಲಿದೆ.

 

Advertisement

Udayavani is now on Telegram. Click here to join our channel and stay updated with the latest news.

Next