Advertisement
ಮೇ 27 ರಿಂದ ಜೂ. 5ರ ವರೆಗೆ ಸ್ಲೊವಾ ಕಿಯಾದಲ್ಲಿ ನಡೆದ ವಿಶ್ವಮಟ್ಟದ ಟೂರ್ನಿ ಯಲ್ಲಿ ಸಮರ್ಥ್ ಎರಡು ಪ್ರಶಸ್ತಿ ಜಯಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದರೊಂದಿಗೆ ವೈಯಕ್ತಿಕ 131 ಅಂಕಗಳನ್ನು ತನ್ನ ಬುಟ್ಟಿ ಹಾಕಿಕೊಂಡಿದ್ದಾರೆ. ಈ ಹಿಂದೆಯೂ 2015ರಲ್ಲಿ ಸ್ಲೊವಾಕಿಯಾದಲ್ಲಿ ನಡೆದ ವಿಶ್ವಮಟ್ಟದ ದೈಹಿಕ ಅಸಮರ್ಥರ ಟೂರ್ನಿಯಲ್ಲಿ ಕಂಚಿನ ಪದಕ, ಕಳೆದ ವರ್ಷ ಸರ್ಬಿಯಾದಲ್ಲಿ ನಡೆದ ಅಂತಾರಾಷ್ಟ್ರೀಯ ಅಸಮರ್ಥರ ಚೆಸ್ ಕೂಟದಲ್ಲಿ ¸ಕಂಚಿನ ಪದಕ ಗೆದ್ದಿದ್ದ ಅವರು ಈ ಬಾರಿ ಮತ್ತೆ ಪದಕ ಗೆದ್ದು ಹ್ಯಾಟ್ರಿಕ್ ಸಾಧಿಸಿದರು.
Related Articles
ಜಗದೀಶ್ ರಾವ್-ವಿನುತಾ ದಂಪತಿ ಪುತ್ರನಾಗಿರುವ ಸಮರ್ಥ್ ಹುಟ್ಟಿದ್ದು ಕುಂದಾಪುರ ತಾಲೂಕಿನ ಬಸೂÅರಿನಲ್ಲಿ. ತಂದೆ ಜಗದೀಶ್ ಹೊನ್ನಾವರದಲ್ಲಿ ಸಿಂಡಿಕೇಟ್ ಬ್ಯಾಂಕ್ ಉದ್ಯೋಗಿಯಾಗಿರುವುದರಿಂದ ಹೊನ್ನಾವರದ ಎಸ್ಡಿಎಂ ಪ.ಪೂ. ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದಾರೆ. ತಾಯಿ ವಿನುತಾ ಕಾಲೇಜು ಉಪನ್ಯಾಸಕಿ. ತಂಗಿ ಸಾನ್ವಿ ರಾವ್ 6ನೇ ತರಗತಿ ವ್ಯಾಸಂಗ ಮಾಡುತ್ತಿದ್ದಾಳೆ.
Advertisement
– ಪ್ರಶಾಂತ್ ಪಾದೆ