Advertisement

ಸಮಂತಾ ಸ್ಟೈಲಿಸ್ಟ್ ಪ್ರೀತಮ್ ಜುಕಾಲ್ಕರ್ ಗೆ ಜೀವ ಬೆದರಿಕೆ

03:46 PM Oct 11, 2021 | Team Udayavani |

ಖ್ಯಾತ ನಟಿ ಸಮಂತಾ ರುತ್ ಪ್ರಭು ವಿಚ್ಛೇದನ ಬಳಿಕ ಅವರ ಸ್ಟೈಲಿಸ್ಟ್ ಪ್ರೀತಮ್ ಜುಕಾಲ್ಕರ್ ಅವರಿಗೆ ನಟ ನಾಗಚೈತನ್ಯ ಅಕ್ಕಿನೇನಿ ಅವರ ಬೆಂಬಲಿಗರಿಂದ ಯೂ ಟ್ಯೂಬ್‍ನಲ್ಲಿ ಜೀವ ಬೆದರಿಕೆ ಬರುತ್ತಿವೆಯಂತೆ.

Advertisement

ನಟಿ ಸಮಂತಾ ಹಾಗೂ ನಾಗಚೈತನ್ಯ ವಿಚ್ಛೇದನದ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ನಮ್ಮ ಖಾಸಗಿತನ ಗೌರವಿಸಿ ಎಂದು ಮನವಿ ಮಾಡಿದ್ದರು. ಆದರೆ, ನಾಗಚೈತನ್ಯ ಅಭಿಮಾನಿಗಳು ವಿಚ್ಛೇದನಕ್ಕೆ ಜುಕಾಲ್ಕರ್ ಕಾರಣ ಎಂದು ಆರೋಪಿಸುತ್ತಿದ್ದಾರೆ.

ಜುಕಾಲ್ಕರ್ ಅವರು ಸಮಂತಾ ಅವರ ಸ್ಟೈಲಿಸ್ಟ್ ಮಾತ್ರ ಆಗಿರಲಿಲ್ಲ. ಉತ್ತಮ ಸ್ನೇಹಿತರು. ಆದರೆ, ಸಮಂತಾ ಹಾಗೂ ನಾಗಚೈತನ್ಯ ದಂಪತಿಗಳು ವಿಚ್ಛೇದನವನ್ನು ಅಧಿಕೃತವಾಗಿ ಘೋಷಿಸಿದ ನಂತರ ಸಮಂತಾ ಹಾಗೂ ಜುಕಾಲ್ಕರ್ ಅವರ ಕುರಿತು ವದಂತಿಗಳು ಕೇಳಿಬರುತ್ತಿದೆ. ಇವರಿಬ್ಬರ ನಡುವಿ ಇರುವ ಆತ್ಮೀಯತೆಯನ್ನು ಅಕ್ರಮ ಸಂಬಂಧಕ್ಕೆ ಕಲ್ಪಿಸಿ ಟೀಕೆ ಮಾಡಲಾಗುತ್ತಿದೆ. ಕೆಲವು ಯೂಟ್ಯೂಬರ್ ಗಳು ಜುಕಾಲ್ಕರ್ ಅವರಿಗೆ ಜೀವ ಬೆದರಿಕೆ ಹಾಕಿದ್ದಾರೆ ಎನ್ನುವ ವದಂತಿಗಳು ಇದೀಗ ಕೇಳಿ ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next