Advertisement

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

08:59 AM Apr 25, 2024 | Team Udayavani |

ಹೊಸದಿಲ್ಲಿ: ಸ್ಯಾಮ್‌ ಪಿತ್ರೋಡಾ ಪಿತ್ರಾರ್ಜಿತ ತೆರಿಗೆ ಹೇಳಿಕೆ ವಿವಾದವಾಗುತ್ತಲೇ, ಕಾಂಗ್ರೆಸ್‌ ಅದರಿಂದ ಅಂತರ ಕಾಯ್ದುಕೊಂಡಿದೆ. ಪಿತ್ರೋಡಾ ಹೇಳಿಕೆಯನ್ನು ವೈಭವೀಕರಿಸುವ ಮೂಲಕ, ಪ್ರಧಾನಿಯ ದ್ವೇಷಪೂರಿತ ಪ್ರಚಾರವನ್ನು ಬೇರೆಡೆಗೆ ಸೆಳೆಯುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಕಾಂಗ್ರೆಸ್‌ ಆರೋಪಿಸಿದೆ.

Advertisement

“ಪಿತ್ರೋಡಾ ಹೇಳಿಕೆಯು ಯಾವಾಗಲೂ ಕಾಂಗ್ರೆಸ್‌ನ ಅಭಿಪ್ರಾಯವಾಗಿರುತ್ತದೆ ಎಂದು ಭಾವಿಸಬೇಕಿಲ್ಲ. ಅವರ ಹೇಳಿಕೆಯನ್ನು ಹಿಂಜಿ, ಪ್ರಧಾನಿಯ ದ್ವೇಷ ಮಯ ಪ್ರಚಾರ ಕುರಿತಾದ ಗಮನವನ್ನು ಬೇರೆಡೆಗೆ ಸೆಳೆಯುವ ಪ್ರಯತ್ನ ಮಾಡಲಾಗುತ್ತಿದೆ’ ಎಂದು ಕಾಂಗ್ರೆಸ್‌ನ ಜೈರಾಂ ರಮೇಶ್‌ ಟ್ವೀಟ್‌ ಮಾಡಿದ್ದಾರೆ.

ಪಿತ್ರಾರ್ಜಿತ ಆಸ್ತಿ ತೆರಿಗೆ ಉದ್ದೇಶವಿಲ್ಲ: ಖರ್ಗೆ
ದೇಶದಲ್ಲಿ ಪಿತ್ರಾರ್ಜಿತ ಆಸ್ತಿ ತೆರಿಗೆ ಜಾರಿ ಉದ್ದೇಶವಿಲ್ಲ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿ ದ್ದಾರೆ. ವಿವಾದಕ್ಕೆ ಪ್ರತಿಕ್ರಿಯೆ ನೀಡಿದ ಅವರು, “ದೇಶದಲ್ಲಿ ಸಂವಿಧಾನವಿದೆ. ಯಾವುದೇ ಪಕ್ಷ ಇಂಥ ತೆರಿಗೆ ವಿಧಿಸ ಲಾಗದು. ಅವರ(ಮೋದಿ) ವಿಚಾರಗಳನ್ನು ನಮ್ಮ ಬಾಯಿಂದ ಏಕೆ ಹೇಳಿಸುತ್ತಿದ್ದೀರಿ. ಮತಕ್ಕಾಗಿ ಅವರು ಈ ಎಲ್ಲ ಆಟ ಆಡುತ್ತಿದ್ದಾರೆ’ ಎಂದು ಟೀಕಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next