Advertisement

ಸಲ್ಮಾನ್‌ಗೆ D-Day:ಅಕ್ರಮ ಶಸ್ತ್ರಾಸ್ತ್ರ ಪ್ರಕರಣದ ತೀರ್ಪು ಇಂದು 

09:27 AM Jan 18, 2017 | |

ಜೋಧಪುರ: ನಟ ಸಲ್ಮಾನ್‌ ಖಾನ್‌ ಆರೋಪಿಯಾಗಿರುವ 1998ರಲ್ಲಿ ಕೃಷ್ಣ ಮೃಗ ಬೇಟೆಯಾಡಿದ ಪ್ರಕರಣವೊಂದರ ತೀರ್ಪನ್ನು ಜೋಧಪುರ ಸ್ಥಳೀಯ ನ್ಯಾಯಾಲಯ ಬುಧವಾರ ಪ್ರಕಟಿಸಲಿದೆ. 

Advertisement

1998ರ ಅ.1ರಂದು “ಹಮ್‌ ಸಾಥ್‌ ಸಾಥ್‌ ಹೈ’ ಚಿತ್ರೀಕರಣದ ವೇಳೆ ಸಲ್ಮಾನ್‌ ಖಾನ್‌ ಅವರು ಅಳಿವಿನಂಚಿನಲ್ಲಿರುವ ಕೃಷ್ಣಮೃಗವನ್ನು ಬೇಟೆಯಾಡಿದ್ದರು ಎಂದು ಆರೋಪಿಸಲಾಗಿತ್ತು. ಈ ಬೇಟೆಗೆ ಅಕ್ರಮ ಶಸ್ತ್ರಾಸ್ತ್ರ ಬಳಸಿದ ಆರೋಪವೂ ಸಲ್ಮಾನ್‌ ಖಾನ್‌ ಮೇಲಿದ್ದು, ಅಕ್ರಮ ಶಸ್ತ್ರಾಸ್ತ್ರ ಕುರಿತ ತೀರ್ಪು ಜ.18ರಂದು ಹೊರಬೀಳಲಿದೆ. ಅಂದು ವಿಚಾರಣೆ ವಿಚಾರಣೆಗೆ ಹಾಜರಾಗುವಂತೆ ಸಲ್ಮಾನ್‌ ಅವರಿಗೆ ಕೋರ್ಟ್‌ ಸೂಚನೆ ನೀಡಿದ್ದು, ಆ ಪ್ರಕಾರ ಮಂಗಳವಾರ ಸಂಜೆಯೇ ಜೋಧಪುರಕ್ಕೆ ಸಲ್ಲು ಆಗಮಿಸಿದ್ದಾರೆ.

ನ್ಯಾಯಾಲಯದ ಆವರಣದಲ್ಲಿ ಭಾರೀ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ. 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next