Advertisement

ಸೇಲಂನಲ್ಲಿ ಭೀಕರ ಅಪಘಾತ : ಕನ್ನಡಿಗರು ಸೇರಿ 7 ಮಂದಿ ದುರ್ಮರಣ 

09:01 AM Sep 01, 2018 | |

ಸೇಲಂ: ತಮಿಳುನಾಡಿನ ಸೇಲಂ- ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಶನಿವಾರ ನಸುಕಿನ ವೇಳೆ ಎರಡು ಖಾಸಗಿ ಬಸ್‌ಗಳ ನಡೆವೆ ಸಂಭವಿಸಿದ ಭೀಕರ ಅಪಘಾತದಲ್ಲಿ  7  ಮಂದಿ ದಾರುಣವಾಗಿ ಸಾವನ್ನಪ್ಪಿದ್ದಾರೆ. 

Advertisement

ಮೃತರ ಪೈಕಿ ಮೂವರು ಕನ್ನಡಿಗರು ಎಂದು ತಿಳಿದು ಬಂದಿದ್ದು, ನಾಲ್ವರು ಕೇರಳ ಮೂಲದವರು ಎನ್ನಲಾಗಿದೆ. 

ಒಂದು ಖಾಸಗಿ ಬಸ್‌ ಬೆಂಗಳೂರಿನಿಂದ ತಿರುವೆಲ್ಲಾಗೆ  ಪ್ರಯಾಣಿಸುತ್ತಿತ್ತು.ಇನ್ನೊಂದು ಬಸ್‌ ಸೇಲಂನಿಂದ ಕೃಷ್ಣಗಿರಿಯತ್ತ ಪ್ರಯಾಣಿಸುತ್ತಿತ್ತು. ಓವರ್‌ಟೇಕ್‌ ಮಾಡಲು ಮುಂದಾದ ವೇಳೆ ಅವಘಡ ಸಂಭವಿಸಿದೆ ಎಂದು ವರದಿಯಾಗಿದೆ. 

ಅವಘಡ ನಡೆದ ಕೂಡಲೆ ಸ್ಥಳೀಯರು ರಕ್ಷಣಾ ಕಾರ್ಯ ನಡೆಸಿ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸುವಲ್ಲಿ ನೆರವಾಗಿದ್ದಾರೆ. ಜಿಲ್ಲಾಧಿಕಾರಿ ರೋಹಿಣಿ ಮತ್ತು ಪೊಲೀಸ್‌ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದ್ದಾರೆ. 

20 ಕ್ಕೂ ಹೆಚ್ಚು ಮಂದಿ ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. 

Advertisement

ಮೃತ ದುರ್ದೈವಿಗಳ ಗುರುತು ಇನ್ನಷ್ಟೇ ಪತ್ತೆಯಾಗಬೇಕಿದೆ. 

Advertisement

Udayavani is now on Telegram. Click here to join our channel and stay updated with the latest news.

Next