Advertisement

ಗಾಂಜಾ ಮಾರಾಟ: ಮೂವರ ಬಂಧನ

12:49 PM Apr 23, 2018 | Team Udayavani |

ಬೆಂಗಳೂರು: ಗಾಂಜಾ ಮಾರಾಟ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಎಚ್‌ಎಎಲ್‌ ಠಾಣೆ ಪೊಲೀಸರು ಬಂಧಿಸಿದ್ದಾರೆ. ಕಮ್ಮನಹಳ್ಳಿಯ ಅರ್ಷದ್‌ ಅಲಿ (23) ಎಲ್‌.ಬಿ.ಶಾಸ್ತ್ರೀ ನಗರದ ರಾಹುಲ್‌ ಸುಂದರೇಶನ್‌ (20) ಹಾಗೂ ನ್ಯೂ ತಿಪ್ಪಸಂದ್ರದ ಲಕ್ಷ್ಮಣ್‌ ಕೆ. ಬಂಧಿತರು. 

Advertisement

ಇಸ್ಲಾಂಪುರ ಸಮೀಪದ ಆಟದ ಮೈದಾನದಲ್ಲಿ ಗಾಂಜಾ ತುಂಬಿದ್ದ ಚಿಕ್ಕ ಪ್ಯಾಕೆಟ್‌ಗಳನ್ನು ಮಾರಾಟ ಮಾಡುತ್ತಿರುವ ಬಗ್ಗೆ ಬಂದ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಲಾಯಿತು. ಈ ವೇಳೆ ಮೂವರು ಆರೋಪಿಗಳು ಸಿಕ್ಕಬಿದ್ದಿದ್ದು, ಅವರಿಂದ 1.5 ಕೆ.ಜಿ. ಗಾಂಜಾ, 4 ಡ್ರ್ಯಾಗರ್‌, ಒಂದು ಲ್ಯಾಪ್‌ ಟಾಪ್‌ ವಶಪಡಿಸಿಕೊಳ್ಳಲಾಗಿದೆ.

ಕಾರ್ಯಾಚರಣೆ ವೇಳೆ ಬಂಧಿತರೊಂದಿಗಿದ್ದ ಸದ್ದಾಂ, ಸಿದ್ದಿಕಿ, ಖಾಸಿಪ್‌, ಜಾವಿದ್‌, ಅಸ್ಲಾಂ ಎಂಬುವವರು ಪರಾರಿಯಾಗಿದ್ದು, ಬಂಧನಕ್ಕೆ ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಗಳು ಹೊಸಕೋಟೆ, ಆಂಧ್ರಪ್ರದೇಶದ ಗಡಿ ಭಾಗಗಳಿಂದ ಮದ್ಯವರ್ತಿಗಳ ಮೂಲಕ ಗಾಂಜಾ ತರಿಸಿಕೊಂಡು ಚಿಕ್ಕ ಪ್ಯಾಕೆಟ್‌ಗಳಲ್ಲಿ ತುಂಬಿ 200ರಿಂದ 300 ರೂ.ಗೆ ಮಾರಾಟ ಮಾಡುತ್ತಿದ್ದರು.

ಅಲ್ಲದೆ, ಆರೋಪಿಗಳೆಲ್ಲರೂ ಗಾಂಜಾ ವ್ಯಸನಿಗಳಾಗಿದ್ದು, ಗಾಂಜಾ ಮಾರಾಟದ ಜತೆಗೆ ಡ್ರ್ಯಾಗರ್‌ ಇಟ್ಟುಕೊಂಡು ಸಾರ್ವಜನಿಕರನ್ನು ಹೆದರಿಸಿ ಸುಲಿಗೆ ಮಾಡುತ್ತಿದ್ದರು ಎಂಬ ಬಗ್ಗೆ ವಿಚಾರಣೆ ವೇಳೆ ಬೆಳಕಿಗೆ ಬಂದಿದೆ. ಈ ಸಂಬಂಧ ತನಿಖೆ ಮುಂದುವರಿದಿದೆ ಎಂದು ಪೊಲೀಸರು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next