Advertisement

Sakleshpura: ವಿದ್ಯುತ್‌ ತಂತಿ ತಗಲಿ ಕಾಡಾನೆ ಸಾವು

12:15 AM Oct 18, 2024 | Team Udayavani |

ಸಕಲೇಶಪುರ: ತಾಲೂಕಿನ ಬಾಳ್ಳುಪೇಟೆ ಬನವಾಸೆಯಲ್ಲಿ ವಿದ್ಯುತ್‌ ತಂತಿಗೆ ಸೊಂಡಿಲು ತಗಲಿ ಕಾಡಾನೆ ಮೃತಪಟ್ಟಿದೆ. ಇದರಿಂದಾಗಿ ಈ ವರ್ಷ ಜಿಲ್ಲೆಯಲ್ಲಿ 3 ಕಾಡಾನೆ ಮೃತಪಟ್ಟಂತಾಗಿದೆ. ಬುಧವಾರ ರಾತ್ರಿ ಬನವಾಸೆ ಗ್ರಾಮದ ಬಳಿ ಸಂಚರಿಸುತ್ತಿತ್ತು. ಬನವಾಸೆಯ ಬಿಎಸ್ಸೆನ್ನೆಲ್‌ ಟವರ್‌ಗೆ 11 ಕೆ.ವಿ ವಿದ್ಯುತ್‌ ಕಂಬಗಳಿಗೆ ಅಳವಡಿಸಿದ್ದ ಎಲೆಕ್ಟ್ರಿಕಲ್‌ ಡಿಯೋಲ್‌ ಕೆಳಗೆ ವಾಲಿತ್ತು.

Advertisement

ರಾತ್ರಿ ತಂತಿಗೆ ಸೊಂಡಿಲು ತಾಗಿ ಸುಮಾರು 25 ವರ್ಷದ ಕಾಡಾನೆ ಮೃತಪಟ್ಟಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಮರಣೋತ್ತರ ಪರೀಕ್ಷೆ ನಡೆಸಿ ಅಂತ್ಯಸಂಸ್ಕಾರ ನಡೆಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next