Advertisement

“ಸಖೀ’ಕೇಂದ್ರ ಕಾಮಗಾರಿಗೆ ಚಾಲನೆ

02:27 PM Dec 16, 2019 | Suhan S |

ಗದಗ: ಜಿಲ್ಲಾಸ್ಪತ್ರೆ ಕಟ್ಟಡ ಹಿಂಭಾಗದಲ್ಲಿ ದೌರ್ಜನ್ಯಕ್ಕೆ ಒಳಗಾಗುವ ಮಹಿಳೆಯರಿಗೆ ತುರ್ತು ವೈದ್ಯಕೀಯ, ಪೊಲೀಸ್‌ ನೆರವು, ಚಿಕಿತ್ಸೆ, ಕಾನೂನು ನೆರವು ಹಾಗೂ ಸಮಾಲೋಚನೆ ಒಂದೇ ಸೂರಿನಡಿ ಸೇವೆ ಒದಗಿಸುವ “ಸಖೀ’ ಕೇಂದ್ರದ ಕಟ್ಟಡ ಕಾಮಗಾರಿಗೆ ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ. ಪಾಟೀಲ ಭೂಮಿಪೂಜೆ ನೆರವೇರಿಸಿದರು.

Advertisement

ಈ ಕೇಂದ್ರಕ್ಕೆ 49 ಲಕ್ಷ ರೂ. ವೆಚ್ಚದಲ್ಲಿ 1892 ಚ.ಅಡಿ ಕಟ್ಟಡ ನಿರ್ಮಿತಿ ಕೇಂದ್ರದಿಂದ ನಿರ್ಮಾಣ ಮಾಡಲಿದ್ದು, ದೌರ್ಜನ್ಯಕ್ಕೆ ಒಳಗಾಗುವ ಮಹಿಳೆಗೆ ವೈದ್ಯಕೀಯ ತಪಾಸಣೆ, ಚಿಕಿತ್ಸೆ ಮತ್ತು ಎಫ್‌.ಐಆರ್‌. ದಾಖಲು,ಕಾನೂನು ರಕ್ಷಣೆ, ಸಮಾಲೋಚನೆ, ವಸತಿ ಮುಂತಾದ ಸೌಲಭ್ಯ ಉಚಿತವಾಗಿ ಕಲ್ಪಿಸಲಿದ್ದು, ದಿನದ 24 ಗಂಟೆಗಳೂ ಕಾರ್ಯನಿರ್ವಹಿಸಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು. ಶಾಸಕ ಎಚ್‌.ಕೆ. ಪಾಟೀಲ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿದ್ದರು.

ಜಿಪಂ ಅಧ್ಯಕ್ಷ ಸಿದ್ಧಲಿಂಗೇಶ್ವರ ಎಚ್‌. ಪಾಟೀಲ, ಶಾಸಕ ಕಳಕಪ್ಪ ಬಂಡಿ, ಜಿಪಂ ಉಪಾಧ್ಯಕ್ಷೆ ಮಲ್ಲವ್ವ ಬಿಚ್ಚಾರ, ತಾಪಂ ಸದಸ್ಯೆ ಮುಮ್ತಾಜ್‌ ಬಿ. ನದಾಫ್‌, ಜಿಲ್ಲಾ ಧಿಕಾರಿ ಎಂ.ಜಿ. ಹಿರೇಮಠ, ಜಿಪಂ ಸಿಇಒ ಡಾ| ಆನಂದ್‌ ಕೆ., ಜಿಲ್ಲಾ ಪೊಲೀಸ್‌ ವರಿಷ್ಠಾ ಧಿಕಾರಿ ಶ್ರೀನಾಥ ಜೋಶಿ, ಜಿಮ್ಸ್‌ನಿರ್ದೇಶಕ ಪಿ.ಎಸ್‌. ಭೂಸರಡ್ಡಿ, ಪ್ರಾಚಾರ್ಯ ಶ್ರೀನಿವಾಸ ದೇಶಪಾಂಡೆ, ಜಿಲ್ಲಾಸ್ಪತ್ರೆ ಸರ್ಜನ್‌ ಡಾ| ಬಿ.ಸಿ. ಕರಿಗೌಡರ, ವೈದ್ಯಕೀಯ ಅಧೀಕ್ಷಕ ಡಾ| ಪಲ್ಲೇದ ಜಿ.ಎಸ್‌, ಡಾ| ಸೋಮಶೇಖರ ಬಿಜ್ಜಳ, ಮಹಿಳಾ ಮತ್ತು ಅಭಿವೃದ್ಧಿ ಉಪನಿರ್ದೇಶಕಿ ಅಕ್ಕಮಹಾದೇವಿ ಕೆ.ಎಚ್‌., ನಿರ್ಮಿತಿ ಕೇಂದ್ರದ ಯೋಜನಾ ವ್ಯವಸ್ಥಾಪಕ ಜಿ.ವಿ. ಶಿರೋಳ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next