Advertisement

ಸೈನಾ, ಶ್ರೀಕಾಂತ್‌ ಒಲಿಂಪಿಕ್ಸ್‌  ಕನಸು ಭಗ್ನ?

11:17 PM May 06, 2021 | Team Udayavani |

ಹೊಸದಿಲ್ಲಿ: ಲಂಡನ್‌ ಒಲಿಂಪಿಕ್ಸ್‌ ಕಂಚಿನ ಪದಕ ವಿಜೇತೆ ಸೈನಾ ನೆಹ್ವಾಲ್‌ ಮತ್ತು ಸ್ಟಾರ್‌ ಬ್ಯಾಡ್ಮಿಂಟನ್‌ ಆಟಗಾರ ಕೆ. ಶ್ರೀಕಾಂತ್‌ ಅವರ ಟೋಕಿಯೊ ಒಲಿಂಪಿಕ್ಸ್‌ ಕನಸು ಭಗ್ನವಾಗುವುದೇ? ಇಂಥದೊಂದು ಅನುಮಾನ ಕಾಡಿದೆ. ವಾಯುಯಾನ ನಿರ್ಬಂಧದಿಂದಾಗಿ ಕೊನೆಯ ಅರ್ಹತಾ ಪಂದ್ಯಾವಳಿಯಾದ ಮಲೇಶ್ಯ ಓಪನ್‌ ಕೂಟದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗದಿರುವುದೇ ಇದಕ್ಕೆ ಕಾರಣ.

Advertisement

ಇಂಡಿಯಾ ಓಪನ್‌ ಟೂರ್ನಿ (ಮೇ 11-16) ಮುಂದೂಡಲ್ಪಟ್ಟ ಬಳಿಕ ಸೈನಾ ಮತ್ತು ಶ್ರೀಕಾಂತ್‌ ಮಲೇಶ್ಯ ಓಪನ್‌ ಮೇಲೆ ಭರವಸೆ ಇರಿಸಿಕೊಂಡಿದ್ದರು (ಮೇ 25-30). ಆದರೆ ಮಲೇಶ್ಯ ಮತ್ತು ಸಿಂಗಾಪುರ ಭಾರತದ ವಿಮಾನಗಳಿಗೆ ನಿಷೇಧ ಹೇರಿವೆ.

ಬ್ಯಾಡ್ಮಿಂಟನ್‌ ತಂಡದ ಆಗಮನಕ್ಕಾಗಿ ಈ ನಿರ್ಬಂಧ ವನ್ನು ಸಡಿಲುಗೊಳಿಸುವಂತೆ ಮಲೇಶ್ಯ ಸರಕಾರವನ್ನು ಭಾರತ ಕೇಳಿಕೊಂಡಿದೆ. ಇದಕ್ಕೆ ಮಲೇಶ್ಯ ಸಕಾರಾತ್ಮಕವಾಗಿ ಸ್ಪಂದಿಸೀತೇ ಎಂಬುದನ್ನು ಕಾದು ನೋಡಬೇಕು.

ಬಿಲ್ಗಾರರಿಗೆ ಸ್ವಿಸ್‌ ವೀಸಾ ಇಲ್ಲ :

ಭಾರತದ ಬಿಲ್ಗಾರರಿಗೆ ಸ್ಟೇಜ್‌ 2 ವರ್ಲ್ಡ್ಕಪ್‌ ಆರ್ಚರಿ ಸ್ಪರ್ಧೆಯಲ್ಲಿ ಭಾಗವಹಿಸುವ ಅವಕಾಶ ತಪ್ಪಿದೆ. ಸ್ವಿಸ್‌ ವೀಸಾವನ್ನು ನಿರಾಕರಿಸಿದ್ದೇ ಇದಕ್ಕೆ ಕಾರಣ.

Advertisement

ಮೇ 17ರಿಂದ 23ರ ತನಕ ಸ್ವಿಜರ್‌ಲ್ಯಾಂಡಿನ ಲುಸಾನ್ನೆಯಲ್ಲಿ ನಡೆಯುವ ಈ ಕೂಟದಲ್ಲಿ ಭಾರತ ಕೂಡ ಪಾಲ್ಗೊಳ್ಳಬೇಕಿತ್ತು. ಆದರೆ ಕೋವಿಡ್‌ ಹಿನ್ನೆಲೆಯಲ್ಲಿ ಭಾರತೀಯರಿಗೆ ಸ್ವಿಸ್‌ ರಾಯಭಾರ ಕಚೇರಿ ವೀಸಾ ನಿರಾಕರಿಸಿದೆ ಎಂಬುದಾಗಿ ಆರ್ಚರಿ ಅಸೋಸಿಯೇಸನ್‌ ಕಾರ್ಯದರ್ಶಿ ಪ್ರಮೋದ್‌ ಚಂದುರ್ಕಾರ್‌ ಹೇಳಿದ್ದಾರೆ.

ಭಾರತೀಯರಿನ್ನು ನೇರವಾಗಿ ಸ್ಟೇಜ್‌ 3 ವರ್ಲ್ಡ್ ಕಪ್‌ ಸ್ಪರ್ಧೆಯಲ್ಲಿ ಪಾಲ್ಗೊಳ್ಳಬೇಕಿದೆ. ಇದು ಜೂ. 23ರಂದು ಪ್ಯಾರಿಸ್‌ನಲ್ಲಿ ಆರಂಭವಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next