Advertisement

ಸಾಯಿಪ್ರಕಾಶ್‌ 99ನೇ ಚಿತ್ರ ಶ್ರೀ ವಿಶ್ವಾರಾಧ್ಯ ಸಿದ್ಧಿಪುರುಷರು

04:41 PM Feb 19, 2017 | |

ನಿರ್ದೇಶಕ ಸಾಯಿಪ್ರಕಾಶ್‌ ಈಗ ತಮ್ಮ 99ನೇ ಚಿತ್ರ ನಿರ್ದೇಶನ ಮಾಡಲು ಸಿದ್ಧರಾಗಿದ್ದಾರೆ. ಆ ಚಿತ್ರಕ್ಕೆ “ಶ್ರೀ ವಿಶ್ವಾರಾಧ್ಯ ಸಿದ್ಧಿಪುರುಷರು’ ಎಂದು ಹೆಸರಿಡಲಾಗಿದೆ. ಅಲ್ಲಿಗೆ ಸಾಯಿಪ್ರಕಾಶ್‌ ಮತ್ತೂಂದು ಭಕ್ತಿಪ್ರಧಾನ ಚಿತ್ರ ನಿರ್ದೇಶಿಸಲು ಹೊರಟಿದ್ದಾರೆನ್ನಬಹುದು. ಈ ಚಿತ್ರ ಮಾರ್ಚ್‌ 3 ರಂದು
ಆರಂಭವಾಗಲಿದೆ. ವಿಶ್ವ ಗಂಗ ಪ್ರೊಡಕ್ಷನ್‌ನಡಿ ಚಿತ್ರ ನಿರ್ಮಾಣವಾಗುತ್ತಿದೆ. ಶ್ರೀ ವಿಶ್ವಾರಾಧ್ಯ ಸಿದ್ದಿ ಸಂಸ್ಥಾನ ಮಠ ಯಾದಗಿರಿಯ ಬಳಿ ಇರುವ ದೇವಸ್ಥಾನ ಅಬ್ಬೆ ತುಮಕೂರು ಗ್ರಾಮದಲ್ಲಿ ನೆಲಸಿದೆ.

Advertisement

ಅಲ್ಲಿಯ ಪ್ರಸಿದ್ದ ವ್ಯಕ್ತಿ ಅಂದರೆ ಜೀವಂತ ಸಮಾಧಿ ಆದ ಶ್ರೀ ವಿಶ್ವಾರಾಧ್ಯ ಸಿದ್ದಿಪುರುಷರು. ಮಹಾಶಿವರಾತ್ರಿಯ ಸಮಯದಲ್ಲಿ ಇಲ್ಲಿ ನಡೆಯುವ ಜಾತ್ರೆಗೆ ಭಕ್ತಾದಿಗಳು ಕರ್ನಾಟಕ, ಮಹಾರಾಷ್ಟ್ರ,
ಆಂಧ್ರ ಪ್ರದೇಶ, ತಮಿಳು ನಾಡು ರಾಜ್ಯಗಳಿದ ಧಾವಿಸಿ ಶ್ರೀ ವಿಶ್ವಾರಾಧ್ಯರ ಸಂಸ್ಥಾನದ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವರು. ಶ್ರೀ ವಿಶ್ವಾರಾಧ್ಯರು ಸಾಯಿಪ್ರಕಾಶ್‌ 99ನೇ ಚಿತ್ರ
ಶ್ರೀ ವಿಶ್ವಾರಾಧ್ಯ ಸಿದ್ಧಿಪುರುಷರು ಈಗಲೂ ಸಕಲ ಸಂಕಷ್ಟಗಳನ್ನು ಭಕಾಧಿಗಳಿಗೆ ಪರಿಹರಿಸಿರುವ
ಉದಾಹರಣೆಗಳಿವೆ. ಈಗ ಶ್ರೀ ವಿಶ್ವಾರಾಧ್ಯ ಸ್ವಾಮಿಗಳ ಬಗ್ಗೆ ಹಲವಾರು ವಿಚಾರಗಳನ್ನು
ಪರದೆಯ ಮೇಲೆ ತರಲು ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ ಹಿರಿಯ ನಿರ್ದೇಶಕ ಸಾಯಿಪ್ರಕಾಶ್‌.

ಚಿತ್ರದಲ್ಲಿ ಸಾಯಿಕುಮಾರ್‌ ನಟಿಸುವ ಸಾಧ್ಯತೆ ಇದೆಯಂತೆ. ನಿರ್ದೇಶಕ ಸಾಯಿಪ್ರಕಾಶ್‌ ಸಧ್ಯದÇÉೇ ಅವರ ಕಲಾವಿದರ ಹಾಗೂ ತಾಂತ್ರಿಕ ತಂಡವನ್ನು ಆಯ್ಕೆ ಮಾಡಿಕೊಳ್ಳಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next