Advertisement

ಡಾ|ವೀಣಾ ಬನ್ನಂಜೆಗೆ ಸಾಹಿತ್ಯಶ್ರೀ ಪ್ರಶಸ್ತಿ

01:14 AM Feb 27, 2021 | Team Udayavani |

ಉಡುಪಿ: ವಾಗ್ಮಿ, ಚಿಂತಕಿ ಡಾ|ವೀಣಾ ಬನ್ನಂಜೆಯವರಿಗೆ 2020ನೇ ಸಾಲಿನ ಸಾಹಿತ್ಯ ಅಕಾಡೆಮಿಯ ಸಾಹಿತ್ಯಶ್ರೀ ಪ್ರಶಸ್ತಿ ಲಭಿಸಿದೆ.

Advertisement

ಹಿರಿಯ ವಿದ್ವಾಂಸ ಡಾ| ಬನ್ನಂಜೆ ಗೋವಿಂದಾಚಾರ್ಯರ ಪುತ್ರಿಯಾದ ಡಾ| ವೀಣಾ ಬನ್ನಂಜೆಯವರು ಪ್ರಾಚೀನ ಮತ್ತು ಅರ್ವಾಚೀನ ತಣ್ತೀಜ್ಞಾನಿಕ ಅಂಶಗಳನ್ನು ತುಲನಾತ್ಮಕವಾಗಿ ವಿಮರ್ಶೆ ಮಾಡುವ ವಾಗ್ಮಿ, ಚಿಂತಕಿಯಾಗಿ ರೂಪುಗೊಂಡಿದ್ದಾರೆ. ಹಿರಿಯ ಸಾಹಿತಿ, ಬರೆಹಗಾರ ಸತ್ಯಕಾಮರ ಮಾರ್ಗದರ್ಶನದಲ್ಲಿ ಬೆಳೆದು ಬಂದ ಡಾ|ವೀಣಾ ಅವರಿಗೆ ಇನ್ನೊಂದು ಕಡೆ ತಂದೆ ಗೋವಿಂದಾಚಾರ್ಯರ ಮಾರ್ಗದರ್ಶನವೂ ಲಭಿಸಿತ್ತು. ಅನೇಕ ಸಾರ್ವಜನಿಕ ಸಭೆಗಳಲ್ಲಿ ತತ್ತ Ìಜ್ಞಾನ ವಿಷಯದಲ್ಲಿ ಉಪನ್ಯಾಸ ನೀಡುವುದಲ್ಲದೆ ಬರೆಹದಲ್ಲಿಯೂ ಉತ್ತಮ ಸಾಧನೆ ಮಾಡುತ್ತಿದ್ದಾರೆ.

ಸತ್ಯಕಾಮರ ಕರ್ಮಭೂಮಿ ಯಾದ ಬಾಗಲಕೋಟೆ ಜಿಲ್ಲೆಯ ಕಲ್ಲಹಳ್ಳಿಯ ಆಶ್ರಮವನ್ನು ವೀಣಾ ಅವರು ವಿವಿಧ ಆಯಾಮಗಳಲ್ಲಿ ಅಭಿವೃದ್ಧಿಪಡಿಸಿದ್ದಾರೆ. ಸತ್ಯಕಾಮರ ಸ್ಮರಣಾರ್ಥ ಅನೇಕ ಕಾರ್ಯಕ್ರಮಗಳನ್ನು ಡಾ| ವೀಣಾಬನ್ನಂಜೆಯವರು ಪ್ರತಿವರ್ಷವೂ ನಡೆಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next