Advertisement

ಸಾಗುವಾನಿ ಮರ ಸಾಗಾಟ ಯತ್ನ: ಇಬ್ಬರ ಬಂಧನ

07:30 AM Aug 06, 2017 | |

ಉಡುಪಿ: ಉಡುಪಿಯ ಇನ್ನಂಜೆ ರೈಲು ನಿಲ್ದಾಣದ ಬಳಿ ಇದ್ದ ಸಾಗುವಾನಿ ಮರವನ್ನು ಅಕ್ರಮವಾಗಿ ಕತ್ತರಿಸಿ, ಮಾರಾಟ ಮಾಡಲು ಯತ್ನಿಸುತ್ತಿದ್ದ ಇಬ್ಬರನ್ನು ಕೊಂಕಣ ರೈಲ್ವೇ ರಕ್ಷಣಾ ದಳದವರು ಪತ್ತೆ ಮಾಡಿ ಬಂಧಿಸಿದ್ದಾರೆ.

Advertisement

ಇನ್ನಂಜೆಯ ಗುಣಕರ ಮಂಡೇಡಿ, ಪಾಂಗಾಳ ಸರಸ್ವತಿ ನಗರದ ಸಂಪತ್‌ ಬಂಧಿತ ಆರೋಪಿಗಳು. ಅವರಿಂದ 50,000 ಬೆಲೆ ಬಾಳುವ ಸಾಗುವಾನಿ ಮರದ ತುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ. 

ಆರೋಪಿಗಳನ್ನು ನ್ಯಾಯಾಲಯಕ್ಕೆ  ಹಾಜರುಪಡಿಸಲಾಗಿದ್ದು, ನ್ಯಾಯಾ ಲಯವು ನ್ಯಾಯಾಂಗ ಬಂಧನ ವಿಧಿಸಿದೆ. ಕೊಂಕಣ ರೈಲ್ವೇ ರಕ್ಷಣಾ ದಳದ ನಿರೀಕ್ಷಕ ಶಿವರಾಮ ರಾಥೋಡ್‌, ಉಪ ನಿರೀಕ್ಷಕ ಸಂತೋಷ್‌ ಗಾಂವ್ಕರ್‌, ಸಿಬಂದಿ ಆಶ್ವಥ್‌, ಗುರುರಾಜ್‌, ವೇಣು ಮತ್ತು ಲೋಬೋ ಅವರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next