Advertisement

ಪಾನಿಪುರಿ ಗಾಡಿಯಲ್ಲಿ ತರಕಾರಿ ಮಾರಾಟ!

04:21 PM Apr 23, 2020 | Naveen |

ಸಾಗರ: ಕೋವಿಡ್ ಹಿನ್ನೆಲೆಯಲ್ಲಿ ಭೌತಿಕ ಅಂತರ ಕಾಪಾಡುವ ನಿಟ್ಟಿನಲ್ಲಿ ಸ್ಥಳೀಯ ಆಡಳಿತ ನಿಯಮಗಳಲ್ಲಿ ಮಾರ್ಪಾಡುಗಳನ್ನು ತರುತ್ತಲೇ ಇದೆ. ತರಕಾರಿ ಮಾರಾಟಕ್ಕೆ ಸಿಕ್ಕ ಅವಕಾಶವನ್ನು ಬಳಸಿಕೊಂಡು ನಗರದ ಬೀದಿ- ಬೀದಿಗಳಲ್ಲೆಲ್ಲ ವ್ಯಾಪಾರ ಆರಂಭವಾದಾಗ ವಾರದ ಮೂರು ದಿನಕ್ಕೆ ಸೀಮಿತಗೊಳಿಸುವ ಪ್ರಯತ್ನ ನಡೆಯಿತು.

Advertisement

ನಂತರದಲ್ಲಿ ನಗರದ ಹಣ್ಣು- ತರಕಾರಿ ಮಾರಾಟಗಾರರು ತಳ್ಳುಗಾಡಿಯ ಮೂಲಕ ವ್ಯಾಪಾರ ನಡೆಸಲು ಆದೇಶ ನೀಡಲಾಯಿತು. ತಳ್ಳುಗಾಡಿಯ ನಿಯಮ ಬಂದ ತಕ್ಷಣ ಅದನ್ನು ಖರೀದಿಸಿ ವ್ಯವಸ್ಥೆ ಮಾಡಿಕೊಳ್ಳಲಾಗದು. ಈ ಹಿನ್ನೆಲೆಯಲ್ಲಿ ನಗರದ ತರಕಾರಿ ವ್ಯಾಪಾರಿ ಅಯೂಬ್‌ ಲಾಕ್‌ಡೌನ್‌ನಿಂದ ವ್ಯಾಪಾರ ನಿಲ್ಲಿಸಿದ್ದ ಪಾನಿಪುರಿ ಮಾರಾಟಗಾರನ ಗಾಡಿಯನ್ನು ಬಾಡಿಗೆಗೆ ಪಡೆದು ತರಕಾರಿ ಮಾರಲಾರಂಭಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next