Advertisement

Sagara: ಸರಗಳ್ಳತನ; ಇಬ್ಬರು ಆರೋಪಿಗಳ ಬಂಧನ

09:00 PM Oct 01, 2023 | Shreeram Nayak |

ಸಾಗರ: ಸಿನಿಮೀಯ ಮಾದರಿಯಲ್ಲಿ ಕಳೆದ ತಿಂಗಳ 15ರಂದು ಇಲ್ಲಿನ ವಿನೋಬಾ ನಗರದಲ್ಲಿ ಪಾದಚಾರಿ ಒಂಟಿ ಮಹಿಳೆಯ ಬಳಿ ವಿಳಾಸ ಕೇಳುವ ನೆಪದಲ್ಲಿ ಕೊರಳಿನ ಸರ ಕಳವು ಮಾಡಿದ್ದ ಇಬ್ಬರು ಆರೋಪಿಗಳನ್ನು ಯಲ್ಲಾಪುರದಲ್ಲಿ ಬಂಧಿಸಲಾಗಿದೆ.

Advertisement

ಹಾವೇರಿ ಜಿಲ್ಲೆಯ ಸವಣೂರು ತಾಲೂಕಿನ ಅಫಜಲ್ ಹಾಗೂ ಶಿರಸಿಯ ರಮಾನಬೈಲ್‌ನ ಫೈಜಾನ್ ಬಂಧಿತ ಆರೋಪಿಗಳು.

ಭಟ್ಕಳ, ಯಲ್ಲಾಪುರ ಹಾಗೂ ಹೊನ್ನಾವರದಲ್ಲಿ ಇವರ ವಿರುದ್ಧ ಮನೆ ಕಳವು ಪ್ರಕರಣ ದಾಖಲಾಗಿದ್ದ ಹಿನ್ನೆಲೆಯಲ್ಲಿ ಶನಿವಾರ ಯಲ್ಲಾಪುರ ಪೊಲೀಸರು ಕಾರ್ಯಾಚರಣೆ ನಡೆಸಿದ್ದ ಸಂದರ್ಭದಲ್ಲಿ ಸಾಗರದ ಸರ ಕಳುವು ಪ್ರಕರಣದಲ್ಲಿಯೂ ಆರೋಪಿಗಳು ಪಾಲ್ಗೊಂಡಿರುವುದು ಬೆಳಕಿಗೆ ಬಂದಿದೆ.

ಆರೋಪಿಗಳಿಂದ 55 ಗ್ರಾಂ ಬಂಗಾರ, ಘಟನೆಗೆ ಬಳಸಿದ್ದ ಪಲ್ಸರ್ ಬೈಕ್ ವಶಕ್ಕೆ ಪಡೆಯಲಾಗಿದೆ. ಇದಕ್ಕೂ ಮೊದಲು ಶಿರಸಿ, ಮುಂಡಗೋಡಿನಲ್ಲಿ ಕೂಡ ಕಳವು ಪ್ರಕರಣ ಇವರ ಮೇಲೆ ಇತ್ತು.

 

Advertisement
Advertisement

Udayavani is now on Telegram. Click here to join our channel and stay updated with the latest news.

Next