Advertisement

ಚರಕದಿಂದ ಶ್ರಮ ಸಂಸ್ಕೃತಿಗೆ ಮನ್ನಣೆ

07:24 PM Mar 27, 2022 | Team Udayavani |

ಸಾಗರ: ಭಾರತೀಯ ಶ್ರಮ ಸಂಸ್ಕೃತಿಯನ್ನು ಉಳಿಸುವ, ಆ ಮೂಲಕ ಕರಕುಶಲಕರ್ಮಿಗಳಿಗೆ ಆತ್ಮಗೌರವ ಒದಗಿಸುವಕಾರ್ಯವನ್ನು ಚರಕ ಮಾಡುತ್ತಿದೆ ಎಂದುಬಿಜಾಪುರದ ಬಂಜಾರ ಕಸೂತಿ ಒಕ್ಕೂಟದನಿರ್ದೇಶಕಿ ಆಶಾ ಪಾಟೀಲ್‌ ಹೇಳಿದರು.ತಾಲೂಕಿನ ಹೊನ್ನೇಸರದ ಶ್ರಮಜೀವಿಆಶ್ರಯದಲ್ಲಿ ಭೀಮನಕೋಣೆ ಕವಿಕಾವ್ಯಟ್ರಸ್ಟ್‌ ಹಾಗೂ ಬೆಂಗಳೂರಿನ ಕನ್ನಡ ಮತ್ತುಸಂಸ್ಕೃತಿ ನಿರ್ದೇಶನಾಲಯದ ಸಹಯೋಗದೊಂದಿಗೆ ಹಮ್ಮಿಕೊಂಡಿರುವ ಎರಡುದಿನಗಳ ಚರಕ ಉತ್ಸವ ಕಾರ್ಯಕ್ರಮದಲ್ಲಿಶುಕ್ರವಾರ ಅವರು ಮಾತನಾಡಿದರು.

Advertisement

ಸಂಸ್ಕೃತಿ, ಖಾದಿ ವಸ್ತುಗಳ ಬಳಕೆ ಇತ್ಯಾದಿನಶಿಸಿ ಹೋಗುತ್ತಿರುವ ಸಂದರ್ಭದಲ್ಲಿ ಚರಕಶ್ರಮ ಸಂಸ್ಕೃತಿಗೆ ಮನ್ನಣೆ ದೊರಕಿಸಿದೆ.ಕಾಯಕವೇ ಕೈಲಾಸ, ಕೈ ಕೆಸರಾದರೆ ಬಾಯಿಮೊಸರು ಎಂಬ ಮಾತುಗಳು ಚರಕದಲ್ಲಿಕಾರ್ಯ ರೂಪಕ್ಕೆ ಬಂದಿವೆ. ಯುವ ಪೀಳಿಗೆಗೆಆದರ್ಶ ತೋರಿಸುವ ಕಾರ್ಯವನ್ನು ಚರಕದಲ್ಲಿಮಹಿಳೆಯರು ಮಾಡುತ್ತಿದ್ದಾರೆ ಎಂದರು.ದೇಸೀ ಸಂಸ್ಥೆಯ ಶಾರದಾ ಗಣೇಶ್‌ಮಾತನಾಡಿ, ಚರಕ ಸಂಸ್ಥೆಯ ಉದ್ದೇಶಮತ್ತು ಸಫಲತೆಯನ್ನು ಸಮರ್ಪಕವಾಗಿಅರ್ಥ ಮಾಡಿಕೊಳ್ಳಬೇಕು.

ಗ್ರಾಮೀಣಮಹಿಳೆಯರ ಆರ್ಥಿಕ ಸಬಲೀಕರಣಸಾಧ್ಯವಾಗಿರುವುದು ಚರಕದ ಒಂದುಸಾಧ್ಯತೆ ಮಾತ್ರವಾಗಿದೆ ಎಂದರು.ಹೆಗ್ಗೊàಡು ಗ್ರಾಪಂ ಅಧ್ಯಕ್ಷೆ ಸುಮ ಅಧ್ಯಕ್ಷತೆವಹಿಸಿದ್ದರು. 18ನೇ ವರ್ಷದ ಕಾಯಕ ಪ್ರಶಸ್ತಿವಿಭಾಗದಲ್ಲಿ ತಲಾ 5 ಸಾವಿರ ರೂ. ನಗದು,ಫಲಕಗಳನ್ನೊಳಗೊಂಡ 10 ವೈಯಕ್ತಿಕ ಪ್ರಶಸ್ತಿಹಾಗೂ ಅತ್ಯುತ್ತಮ ಕೆಲಸ ನಿರ್ವಹಿಸಿದವಿಭಾಗಗಳಿಗೆ 10 ಸಾವಿರ ರೂ. ನಗದುಹಾಗೂ ಫಲಕಗಳನ್ನೊಳಗೊಂದು ಗುಂಪುಕಾಯಕ ಪ್ರಶಸ್ತಿಯನ್ನು ನೀಡಲಾಯಿತು.ಪ್ರಶಸ್ತಿ ಪುರಸ್ಕೃತರಾದ ಜಿ.ಕೆ. ಶ್ರೀಧರ ಮತ್ತುಲಕ್ಷಿ ¾àನಾರಾಯಣ ಮಾತನಾಡಿದರು.ಚರಕ ಸಂಸ್ಥೆಯ ಪ್ರಸನ್ನ, ಅಧ್ಯಕ್ಷೆ ಗೌರಮ್ಮ,ಮಹಾಲಕ್ಷಿ ¾à, ರಮೇಶ್‌, ಇಂದುಕುಮಾರ್‌,ಶೈಲಜಾ ಪೀಟರ್‌, ರುದ್ರಯ್ಯ ಮುಂತಾದವರುಇದ್ದರು. ಮಧುರಾ ಪ್ರಾರ್ಥಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next