Advertisement

ಚಿಕ್ಕಬಿಲಗುಂಜಿ: ಬಿಜೆಪಿ ಸಾಧನೆ ಕರಪತ್ರ ವಿತರಣೆ

03:35 PM Jun 18, 2020 | Naveen |

ಸಾಗರ: ತಾಲೂಕಿನ ತ್ಯಾಗರ್ತಿ ಸಮೀಪದ ಚಿಕ್ಕಬಿಲಗುಂಜಿಯಲ್ಲಿ ಭಾನುವಾರ ಬಿಜೆಪಿ ಕಾರ್ಯಕರ್ತರು ಪಕ್ಷದ ಪ್ರಮುಖ ಎಪಿಎಂಸಿ ಸದಸ್ಯ ಚೇತನ್‌ರಾಜ್‌ ಕಣ್ಣೂರು ನೇತೃತ್ವದಲ್ಲಿ ಮನೆ- ಮನೆಗೆ ತೆರಳಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಾಧನೆಯ ಮಾಹಿತಿ ಕರಪತ್ರ ವಿತರಿಸಿದರು.

Advertisement

ಲೋಕಸಭಾ ಸದಸ್ಯರು ಹಾಗೂ ಶಾಸಕರು ಜಿಲ್ಲೆ ಹಾಗೂ ತಾಲೂಕಿನಲ್ಲಿ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದು ಅದನ್ನು ಮತದಾರರಿಗೆ ತಿಳಿಸುವ ಕೆಲಸವನ್ನು ನಮ್ಮ ಪಕ್ಷದ ಕಾರ್ಯಕರ್ತರು ಮಾಡುತ್ತಿದ್ದಾರೆ. ಪಕ್ಷ ಸಂಘಟನೆ ಜೊತೆಗೆ ಗ್ರಾಮೀಣ ಪ್ರದೇಶದ ಜನರ ಕುಂದುಕೊರತೆಗಳನ್ನು ಗಮನಿಸಿ ಜನಪ್ರತಿನಿಧಿಗಳಿಗೆ ಮಾಹಿತಿ ನೀಡಲಾಗುವುದು ಎಂದು ಕಣ್ಣೂರು ತಿಳಿಸಿದರು. ಮಂಜುನಾಥ್‌ ಮಂಕಾಳೆ, ಚಂದ್ರಶೇಖರ, ನಾಗರಾಜ, ಪರಶುರಾಮ್‌, ರಾಕೇಶ್‌ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next