Advertisement

ಸಾಗರ: ವೈದ್ಯಕೀಯ ಸಿಬ್ಬಂದಿಗೆ ಆರತಿ ಸಮರ್ಪಣೆ

05:12 PM Apr 29, 2020 | Naveen |

ಸಾಗರ: ಕೋವಿಡ್ ಹಿನ್ನೆಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ವೈದ್ಯ ಸಿಬ್ಬಂದಿ ಹಾಗೂ ಪ್ರಯೋಗಾಲಯ ತಂತ್ರಜ್ಞರಿಗೆ ಆರತಿ ಎತ್ತುವ ಮೂಲಕ ಅವರ ಸೇವೆಗೆ ಅಭಿನಂದನೆ ಸಲ್ಲಿಸಿದ ಘಟನೆ ನಗರದ ಉಪ ವಿಭಾಗೀಯ ಆಸ್ಪತ್ರೆಯಲ್ಲಿ ಮಂಗಳವಾರ ನಡೆಯಿತು.

Advertisement

ಸಾಗರ ಟೌನ್‌ ಮಹಿಳಾ ಸಮಾಜದ ಸದಸ್ಯರು ಆರತಿ ಬೆಳಗಿದರು. ಇದೇ ವೇಳೆ ಆರೋಗ್ಯ ಇಲಾಖೆ ನೌಕರರ ಒಕ್ಕೂಟದ ವತಿಯಿಂದ ಕೋವಿಡ್ ಯೋಧರಿಗೆ ಪೌಷ್ಟಿಕ ಆಹಾರ ವಿತರಣೆಗೆ ಚಾಲನೆ ನೀಡಿದ ಶಾಸಕ ಎಚ್‌. ಹಾಲಪ್ಪ ಹರತಾಳು, ಒಂದು ಕಾಲದಲ್ಲಿ ಆರೋಗ್ಯ ಮತ್ತು ಶಿಕ್ಷಣ ಇಲಾಖೆಯನ್ನು ಅನುತ್ಪಾದಕ ಕ್ಷೇತ್ರ ಎಂದು ಪರಿಗಣಿಸುತ್ತಿದ್ದ ಐಎಎಸ್‌ ವಲಯಕ್ಕೆ ಈಗ ಆರೋಗ್ಯ ಕ್ಷೇತ್ರದ ಮಹತ್ವ ಅರಿವಾಗಿದೆ. ವೈದ್ಯ ಸಿಬ್ಬಂದಿ ಸೇವಾಕಾರ್ಯ ಕುರಿತು ಹಿಂದೆ ನಾನು ಸದನದಲ್ಲಿ ಚರ್ಚೆ ನಡೆಸಿದಾಗ ನನ್ನನ್ನು ನಿರ್ಲಕ್ಷ್ಯದಿಂದ ನೋಡಿದ್ದರು. ಕೋವಿಡ್ ಬಂದ ಈ ವೇಳೆ ಖಾಸಗಿ ಹೈಟೆಕ್‌ ಆಸ್ಪತ್ರೆಗಳ ಹಣೆಬರಹ ಜನಕ್ಕೆ ಅರ್ಥವಾಗಿದೆ ಎಂದು ಹೇಳಿದರು.

ಆರೋಗ್ಯ ಇಲಾಖೆ ನೌಕರರ ಒಕ್ಕೂಟದ ಜಿಲ್ಲಾಧ್ಯಕ್ಷ ಮ. ಸ.ನಂಜುಂಡಸ್ವಾಮಿ ಮಾತನಾಡಿ, ಕೋವಿಡ್ ಸೇವೆಯಲ್ಲಿರುವವರನ್ನೇ ಗುರುತಿಸಿ, ಅವರಿಗೆ ಪೌಷ್ಟಿಕಾಂಶಭರಿತ ಆಹಾರ, ಹಣ್ಣು-ಹಂಪಲು ವಿತರಿಸುವ ಈ ಕೆಲಸ ಜಿಲ್ಲೆಯಲ್ಲಿ ಮೊದಲ ಬಾರಿಗೆ ನಡೆದಿದೆ ಎಂದರು. ಸಿವಿಲ್‌ ಸರ್ಜನ್‌ ಡಾ| ಪ್ರಕಾಶ್‌ ಬೋಸ್ಲೆ, ಡಾ| ನಾಗೇಂದ್ರಪ್ಪ, ಡಾ| ಪರಪ್ಪ, ಆರೋಗ್ಯ ಇಲಾಖೆ ನೌಕರರ ಒಕ್ಕೂಟದ ತಾಲೂಕು ಅಧ್ಯಕ್ಷ ವೈ. ಮೋಹನ್‌ ಇನ್ನಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next