Advertisement

ಕೋವಿಡ್ ವಾರಿಯರ್ಸ್‌ಗೆ ಸನ್ಮಾನ

06:55 PM Jun 24, 2020 | Naveen |

ಸಾಗರ: ನಗರದ ಜೀವನ್‌ ಸೌಹಾರ್ದ ವಿವಿಧೋದ್ದೇಶ ಸಹಕಾರಿ ನಿಯಮಿತದ ವತಿಯಿಂದ ಕೋವಿಡ್ ವಾರಿಯರ್‌ ಗಳನ್ನು ಸನ್ಮಾನಿಸಲಾಯಿತು.

Advertisement

ಕೋವಿಡ್ ಮಹಾಮಾರಿ ನಮ್ಮ ತಾಲೂಕಿನಲ್ಲಿ ವ್ಯಾಪಕವಾಗಿ ಹರಡದಿರಲು ಆಶಾ ಕಾರ್ಯಕರ್ತೆಯರ ಪಾತ್ರ ಪ್ರಮುಖವಾಗಿದೆ ಎಂದು ಸಹಕಾರಿಯ ಅಧ್ಯಕ್ಷ ಮಹಮ್ಮದ್‌ ಇಲಿಯಾಜ್‌ ಹೇಳಿದರು.

ಆಶಾ ಕಾರ್ಯಕರ್ತೆಯರಾದ ಆಯಿಷಾ ಹಾಗೂ ಪೂರ್ಣಿಮಾ ಅವರಿಗೆ ಚೆಕ್‌ ನೀಡುವುದರ ಮೂಲಕ ಪ್ರೋತ್ಸಾಹಿಸಲಾಯಿತು. ಈ ಸಂದರ್ಭದಲ್ಲಿ ಸಹಕಾರಿಯ ಉಪಾಧ್ಯಕ್ಷ ಎಸ್‌.ಕೆ. ಗಣಪತಿ, ವ್ಯವಸ್ಥಾಪಕ ಹರೀಶ್‌ ಕೆ.ಎಸ್‌., ನಿರ್ದೇಶಕರಾದ ಫ್ರಾನ್ಸಿಸ್‌ ಡಿಸೋಜಾ, ರವಿಶಂಕರ್‌ ಹೆಗಡೆ, ನಾಗರಾಜ್‌ ನಾಯ್ಕ, ವಿಶಾಲಾಕ್ಷಿ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next