Advertisement

ಕರ್ತವ್ಯದ ಮಧ್ಯೆಯೇ ರಕ್ತದಾನ

05:44 PM Apr 25, 2020 | Naveen |

ಸಾಗರ: ತಾಲೂಕಿನ ಪಕ್ಕದ ಸಿದ್ಧಾಪುರದ ಮಹಿಳೆಯೋರ್ವಳ ಶಸ್ತ್ರಚಿಕಿತ್ಸೆಗೆ ಬೇಕಾಗಿದ್ದ ಓ ನೆಗೆಟಿವ್‌ ರಕ್ತವನ್ನು ನಗರದ ಪೊಲೀಸ್‌ ದಫೇದಾರ್‌ ಓರ್ವರು ನೀಡಿ ಮಾನವೀಯತೆಯ ಮತ್ತೊಂದು  ಮಗ್ಗುಲನ್ನು ಪರಿಚಯಿಸಿದ ಘಟನೆ ಶುಕ್ರವಾರ ನಡೆದಿದೆ.

Advertisement

ಕೋವಿಡ್ ಹಿನ್ನೆಲೆಯಲ್ಲಿ ಲಾಕ್‌ಡೌನ್‌ ಇರುವುದರಿಂದ ರಕ್ತದಾನಿಗಳನ್ನು ತಕ್ಷಣ ಆಸ್ಪತ್ರೆಯಲ್ಲಿ ವ್ಯವಸ್ಥೆ ಮಾಡಲು ಮಹಿಳೆಯ ಕುಟುಂಬದವರಿಗೆ ಸಾಧ್ಯವಾಗಿಲ್ಲ. ಇಂತಹ ಅನಿವಾರ್ಯ ಸ್ಥಿತಿಯಲ್ಲಿ ನಗರದ ರೆಡ್‌ಕ್ರಾಸ್‌ ಬ್ಲಿಡ್‌ ಬ್ಯಾಂಕ್‌ ಸಂಸ್ಥೆ ತಮ್ಮ ದಾಖಲೆಗಳಲ್ಲಿ ಇರುವ ಡಿವೈಎಸ್ಪಿ ಕಚೇರಿಯ ದಫೇದಾರ್‌ ರತ್ನಾಕರ್‌ ಅವರಿಗೆ ಕರೆ ಮಾಡಿ ವಿಚಾರ ತಿಳಿಸಿದ್ದಾರೆ.

ಕರ್ತವ್ಯ ನಿರತರಾಗಿದ್ದೂ ಸ್ವಲ್ಪ ಸಮಯದ ಬಿಡುವು ಪಡೆದು ಧಾವಿಸಿದ ರತ್ನಾಕರ್‌ ರಕ್ತದಾನ ಮಾಡಿದ್ದಾರೆ. ಪೊಲೀಸರು ಜನರನ್ನು ಕೊರೊನಾದಿಂದ ರಕ್ಷಿಸುವ ಹಿನ್ನೆಲೆಯಲ್ಲಿ ಕೆಲಸ ಮಾಡುವುದರ ಜೊತೆಗೆ ಈ ರೀತಿಯಲ್ಲಿಯೂ ಆರೋಗ್ಯ ರಕ್ಷಣೆಗೆ ಮುಂದಾಗಿರುವುದು ಜನರಲ್ಲಿ ಪೊಲೀಸರ ಬಗ್ಗೆ ವಿಶೇಷ ಮೆಚ್ಚುಗೆ ವ್ಯಕ್ತವಾಗಲು ಕಾರಣವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next