Advertisement

Sagara; ಕೈ ನಡಿಗೆಯಲ್ಲಿ ಬಾಲರಾಮನ ದರ್ಶನ ಪಡೆದ ಭಕ್ತ

10:52 PM Jan 22, 2024 | Shreeram Nayak |

ಸಾಗರ: ಅಯೋಧ್ಯೆಗೆ ತೆರಳಲಾಗದ ತಾಲೂಕಿನ ರಾಮನಗರದ ರಾಮ ಭಕ್ತನೊಬ್ಬ ಕೈಯಲ್ಲಿ ನಡೆದು ನಗರದಲ್ಲಿಯೇ ಆಯೋಧ್ಯಾರಾಮನ ಪ್ರತಿಕೃತಿಯ ದೇವರ ದರ್ಶನ ಪಡೆಯುವ ತಮ್ಮ ಹರಕೆಯನ್ನು ತೀರಿಸಿಕೊಂಡಿರುವ ಘಟನೆ ಸೋಮವಾರ ನಡೆದಿದೆ.

Advertisement

ಸಾಗರದ ನಿವಾಸಿಯಾಗಿರುವ ಪ್ರಭು (26), ಇಲ್ಲಿಂದ ಅಯೋಧ್ಯೆಗೆ ಹೋಗಬೇಕೆನ್ನುವ ಆಸೆ ಇಟ್ಟುಕೊಂಡಿದ್ದರು. ಆದರೆ ತಮ್ಮ ಬಡತನದ ಹಿನ್ನೆಲೆಯಲ್ಲಿ ಅದು ಸಾಧ್ಯವಾಗದಿದ್ದಾಗ, ಇಲ್ಲಿನ ರಾಮನಗರದಲ್ಲಿರುವ ಆಂಜನೇಯ ಸ್ವಾಮಿ ದೇವಸ್ಥಾನದ ಆವರಣದಿಂದ ಪೇಟೆಯ ವಾಸವಿ ದೇವಸ್ಥಾನದಲ್ಲಿ ನಿರ್ಮಿಸಲಾಗಿದ್ದ ಅಯೋಧ್ಯೆ ರಾಮ ಮಂದಿರ ಹಾಗೂ ರಾಮ ಮೂರ್ತಿಯ ದರ್ಶನ ಪಡೆಯಲು ಸೋಮವಾರ ಬೆಳಗ್ಗೆ ಕೈ ನಡಿಗೆ (ತಲೆ ಕೆಳಗಾಗಿ) ಸುಮಾರು 2.5 ಕಿಮೀ ದೂರ ಸಾಗಿ ದೇವರ ದರ್ಶನ ಪಡೆದು ಭಕ್ತಿ ಮೆರೆದಿದ್ದಾರೆ.

ಸುಮಾರು 1.3೦ ಗಂಟೆ ಕಾಲದಲ್ಲಿ ಈ ಸಾಧನೆ ಮಾಡಿದ್ದಾರೆ. ವೃತ್ತಿಯಲ್ಲಿ ಕೂಲಿ ಕೆಲಸ ಮಾಡುತ್ತಿರುವ ಪ್ರಭು ದಂಪತಿಗೆ ಸಾಗರದಿಂದ ಅಯೋಧ್ಯೆಯ ತನಕ ಕಾಲ್ನಡಿಗೆಯಲ್ಲಿ ತೆರಳಿ ಬಾಲ ರಾಮನ ದರ್ಶನ ಪಡೆಯುವ ಬಯಕೆಯಿದೆ.

 

Advertisement

Udayavani is now on Telegram. Click here to join our channel and stay updated with the latest news.

Next