Advertisement

ಸ್ವಾಮಿಗಳ ವೇಷದಲ್ಲಿ ಉಗ್ರರ ದಾಳಿ ಎಚ್ಚರಿಕೆ!:ಯುಪಿಯಲ್ಲಿ ಹೈ ಅಲರ್ಟ್‌ 

11:22 AM Apr 22, 2017 | Team Udayavani |

ಲಕ್ನೋ : ಉತ್ತರ ಪ್ರದೇಶದಲ್ಲಿ ಉಗ್ರರ ದಾಳಿ ಸಾಧ್ಯತೆಯ ಬಗ್ಗೆ ಮಧ್ಯಪ್ರದೇಶ ಗುಪ್ತಚರ ಇಲಾಖೆ ಎಚ್ಚರಿಕೆ ನೀಡಿದೆ. ಉಗ್ರರು ಪೊಲೀಸ್‌ ತಪಾಸಣೆಯಿಂದ ತಪ್ಪಿಸಿಕೊಳ್ಳುವ ಕಾರಣಕ್ಕಾಗಿ ಸ್ವಾಮೀಜಿಗಳು, ಸಾಧು ಸಂತರ ವೇಷದಲ್ಲಿ ಬರುವ ಬಗ್ಗೆ ಸುಳಿವು ಲಭ್ಯವಾಗಿದೆ. 

Advertisement

ಮುಖ್ಯಮಂತ್ರಿ ಆದಿತ್ಯನಾತ್‌ ಅವರು ಜಾವೇದ್‌ ಅಹಮದ್‌ ಅವರನ್ನು ಪೊಲೀಸ್‌ ಮುಖ್ಯಸ್ಥ ಹುದ್ದೆಯಿಂದ ಬದಲಾವಣೆ ಮಾಡಿ ಸುಲ್‌ಖಾನ್‌ ಸಿಂಗ್‌ ಅವರಿಗೆ ಹುದ್ದೆ ನೀಡಿದ ಕೆಲ ಹೊತ್ತಲ್ಲೇ ಎಚ್ಚರಿಕೆ ಹೊರ ಬಿದ್ದಿದೆ. 

ಉಜ್ಜಯಿನಿ -ಭೂಪಾಲ್‌ ರೈಲು ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ ಮಾರ್ಚ್‌ 8 ರಂದು ಐಸಿಸ್‌ ನಂಟು ಹೊಂದಿದ್ದ ಉಗ್ರನೊಬ್ಬನನ್ನು ಲಕ್ನೋದಲ್ಲಿ ಹತ್ಯೆಗೈಯಲಾಗಿತ್ತು. 

ಉತ್ತರ ಪ್ರದೇಶದ ಎಲ್ಲಾ ಆಯಕಟ್ಟಿನ ಮತ್ತು ಪ್ರಮುಖ ದೇವಾಲಯಗಳಲ್ಲಿ ಹೈ ಅಲರ್ಟ್‌ ಘೋಷಿಸಲಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next