Advertisement

“ಅಸಮಾಧಾನ ಸರಿ ಹೋಗುತ್ತೆ’:  ದಿನೇಶ್‌ ಗುಂಡೂರಾವ್‌

04:00 AM Jul 15, 2017 | Team Udayavani |

ಬೆಂಗಳೂರು: ಕೆಪಿಸಿಸಿ ಪದಾಧಿಕಾರಿಗಳಲ್ಲಿ ಕೆಲವರಿಗೆ ಸ್ಥಾನ ಸಿಗಲಿಲ್ಲ ಎಂದು ಕೆಲ ನಾಯಕರು ಅಸಮಾಧಾನಗೊಂಡಿದ್ದರೂ, ಅದನ್ನು ಬಗೆ ಹರಿಸಲಾಗುವುದು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್‌ ಗುಂಡೂರಾವ್‌ ಹೇಳಿದ್ದಾರೆ.

Advertisement

ಆಯ್ಕೆ ಪಟ್ಟಿಯಲ್ಲಿ ಕೆಲ ನಾಯಕರ ಮಕ್ಕಳಿಗೆ ಮಣೆ ಹಾಕಿದ್ದೀವಿ ಎನ್ನುವುದು ಸುಳ್ಳು. ಎಲ್ಲ ವರ್ಗ ಮತ್ತು ಪ್ರಾದೇಶಿಕತೆ ಆಧಾರದಲ್ಲಿ ಆಯ್ಕೆ ಮಾಡಲಾಗಿದೆ. ಕೆಲವರಿಗೆ ಅವಕಾಶ ಕೈ ತಪ್ಪಿರುವುದರಿಂದ ಸ್ವಾಭಾವಿಕವಾಗಿ ಬೇಸರ ಆಗಿರುತ್ತದೆ ಅದನ್ನು ಸರಿಪಡಿಸಲಾಗುವುದು ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಬಿಜೆಪಿ ನಾಯಕರ ವಿರುದಟಛಿ ಹರಿಹಾಯ್ದ ಅವರು, ಬಿಜೆಪಿ ನಾಯಕರು ದಕ್ಷಿಣ ಕನ್ನಡದಲ್ಲಿ ಜಾತಿಯ ವಿಷ ಬೀಜ ಬಿತ್ತುವ ಮೂಲಕ ರಾಜಕೀಯ ಮಾಡಲು ಹೊರಟಿದ್ದಾರೆ. ಯಡಿಯೂರಪ್ಪ ಹೇಳಿದ್ದನ್ನು ಶೋಭಾ ಹೇಳುತ್ತಾರೆ. ಶೋಭಾ ಹೇಳಿದ್ದನ್ನು ಯಡಿಯೂರಪ್ಪ ಕೇಳುತ್ತಾರೆ. ಬಿಜೆಪಿಯವರು ಪ್ರಚೋದನಾಕಾರಿ ಭಾಷಣ ಮಾಡುವ ಮೂಲಕ ಜನರನ್ನು ದಾರಿ ತಪ್ಪಿಸುತ್ತಿದ್ದಾರೆ ಎಂದು ಹೇಳಿದರು. ಮೀರಾ ಕುಮಾರ್‌ ಸಮರ್ಥ ಅಭ್ಯರ್ಥಿ: ರಾಷ್ಟ್ರಪತಿ ಚುನಾವಣೆಯಲ್ಲಿ ಯುಪಿಎ ಬೆಂಬಲಿತ ಅಭ್ಯರ್ಥಿ ಮೀರಾಕುಮಾರ್‌ ಸಮರ್ಥರಾಗಿದ್ದಾರೆ. ಎನ್‌ಡಿಎ
ಬೆಂಬಲಿತ ರಾಮನಾಥ ಕೋವಿಂದ್‌ ತೂಕ ಇರುವ ವ್ಯಕ್ತಿಯಲ್ಲ ಎಂದು ದಿನೇಶ್‌ ಗುಂಡೂರಾವ್‌ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next