Advertisement

ಶ್ರೀ ಸಿದ್ಧಲಿಂಗಯ್ಯ ಮಣ್ಣೂರಮಠ ಅವರಿಗೆ ಸಾಧನಾ ರಾಜ್ಯ ಶ್ರೇಷ್ಠ ಪತ್ರಕರ್ತ ಪ್ರಶಸ್ತಿ

12:19 PM Dec 11, 2021 | Team Udayavani |

ನರಗುಂದ: ಅಭಿವೃದ್ಧಿ ಸಂಸ್ಥೆ ಮಾನವ ಹಕ್ಕುಗಳ ಕೇಂದ್ರ ಧಾರವಾಡ ಇವರು ನರಗುಂದ ಉದಯವಾಣಿ ಕ್ರಿಯಾಶೀಲ ಪತ್ರಕರ್ತರಾದ ಶ್ರೀ ಸಿದ್ಧಲಿಂಗಯ್ಯ ಮಣ್ಣೂರಮಠ  ಅವರಿಗೆ ಸಾಧನಾ ರಾಜ್ಯ ಶ್ರೇಷ್ಠ ಪತ್ರಕರ್ತ ಪ್ರಶಸ್ತಿ ಕೊಟ್ಟು ಗೌರವಿಸಿ ಸನ್ಮಾನಿಸಿದರು.

Advertisement

ನಾಡಿನ ನೆಲ ಜಲ ಉಳಿವಿಗಾಗಿ ಸೇರಿದಂತೆ ಹಲವಾರು ಲೇಖನಗಳಿಗೆ ಶತಾಯುಷಿ ನಾಡೋಜ ಡಾ.ಪಾಟೀಲ ಪುಟ್ಟಪ್ಪ ಅವರ ಸ್ಮರಣಾರ್ಥ ಈ ಪ್ರಶಸ್ತಿ ಕೊಡಲಾಯಿತು.

ಧಾರವಾಡ ಕ.ವಿ.ವ ಸಂಘದ ರಾ.ಹ.ದೇಶಪಾಂಡೆ ಸಭಾ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ನರಗುಂದ ತಾಲೂಕು ಪತ್ರಕರ್ತರಾದ ಸಿದ್ಧಲಿಂಗಯ್ಯ ಮಣ್ಣೂರಮಠ ಸೇರಿದಂತೆ ನ್ಯಾಯವಾದಿ ನೂರಜಹಾನ್ ಕಿಲ್ಲೇದಾರ, ಸಾಮಾಜಿಕ ಹೋರಾಟಗಾರ ಬಿ ಐ ಈಳಗೇರ ಅವರಿಗೆ ಮಾನವ ಹಕ್ಕುಗಳ ಸೇವಾ ಪ್ರಶಸ್ತಿ ಕೊಟ್ಟು ಗೌರವಿಸಲಾಯಿತು.

ಧಾರವಾಡ ಹಿರಿಯ ಸಿವಿಲ್ ನ್ಯಾಯಾಧೀಶರು ಪುಷ್ಪಲತಾ ಸಿ.ಎಂ ಕಾರ್ಯಕ್ರಮ ಉದ್ಘಾಟಿಸಿದರು. ಸಾಧನಾ ಮಾನವ ಹಕ್ಕುಗಳ ಸಂಸ್ಥೆ ಸಂಸ್ಥಾಪಕ

ಡಾ.ಇಸಬೆಲ್ಲ ಝೇವಿಯರ್ ಅಧ್ಯಕ್ಷತೆ ವಹಿಸಿದ್ದರು. ಮಾನವ ಸಮಾನತೆಯಲ್ಲಿ ನನ್ನ ಕರ್ತವ್ಯ ವಿಷಯವಾಗಿ  ಡಾ.ಶಂಭು ಹೆಡೆದಾಳ ಉಪನ್ಯಾಸ ನೀಡಿದರು.

Advertisement

ಪ್ರಶಸ್ತಿಗೆ ಬಾಜನರಾ ಹಿರಿಯ ಪತ್ರಕರ್ತ ಸಿದ್ಧಲಿಂಗಯ್ಯ ಮಣ್ಣೂರಮಠ ನಮ್ಮ ಉದಯವಾಣಿ ಪತ್ರಿಕೆಯ ಗೌರವ ಹೆಚ್ಚಿಸುವಲ್ಲಿ ಶ್ರಮ ವಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next