Advertisement

ಸದ್ಭಾವನಾ ದಿನಾಚರಣೆ : ಕುಲಪತಿಗಳಿಂದ ಪ್ರತಿಜ್ಞಾ ವಿಧಿ ಬೋಧನೆ

06:25 PM Aug 20, 2020 | sudhir |

ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯ ವತಿಯಿಂದ ಸದ್ಭಾವನಾ ದಿನಾಚರಣೆಯನ್ನು ಬೆಂಗಳೂರು ವಿಶ್ವವಿದ್ಯಾಲಯದ ಮಾನ್ಯ ಕುಲಪತಿಗಳಾದ ಪ್ರೊ ವೇಣುಗೋಪಾಲ್ ಕೆಆರ್ ಅವರು ಪ್ರತಿಜ್ಞಾ ವಿಧಿಯನ್ನು ಬೋಧಿಸುವುದರ ಮೂಲಕ ಆಚರಿಸಲಾಯಿತು.

Advertisement

ಸದ್ಭಾವನ ದಿನದ ಆಚರಣೆಯ ಸಂದರ್ಭದಲ್ಲಿ ಬೆಂಗಳೂರು ವಿಶ್ವವಿದ್ಯಾಲಯದ ಕುಲಸಚಿವರಾದ ಶ್ರೀಮತಿ ಕೆ ಜ್ಯೋತಿರವರು, ಕುಲಸಚಿವ ಮೌಲ್ಯಮಾಪನ ರಾದ ಡಾ. ಜಿ.ಟಿ ದೇವರಾಜ್ ಅವರು, ಹಣಕಾಸಿನ ಅಧಿಕಾರಿ ಶ್ರೀಮತಿ ಪಾರ್ವತಿ, ವಿಶ್ವವಿದ್ಯಾಲಯದ ಬೋಧಕ ಹಾಗೂ ಬೋಧಕೇತರ ವರ್ಗದವರು ಉಪಸ್ಥಿತರಿದ್ದು ಪ್ರತಿಜ್ಞಾ ವಿಧಿಯನ್ನು ಸ್ವೀಕರಿಸಿದರು.

ಪ್ರತಿಜ್ಞಾವಿಧಿಯಲ್ಲಿ ಎಲ್ಲರಲ್ಲೂ ಸದ್ಭಾವನೆಯನ್ನು ಮೂಡಿಸಿ ಹಿಂಸಾಚಾರವನ್ನು ತ್ಯಜಿಸುವಂತೆ ಮಾಡಲು ಕೇಂದ್ರ ಸರ್ಕಾರ ನೀಡಿದ ಆದೇಶದಂತೆ ಹಾಗೂ ಪ್ರತಿವರ್ಷದಂತೆ ಆಗಸ್ಟ್ 20ರಂದು ಸದ್ಭಾವನಾ ದಿನವನ್ನು ಸಾಮಾಜಿಕ ಅಂತರ ಕಾಯ್ದುಕೊಂಡು ಬೆಂಗಳೂರು ವಿದ್ಯಾಲಯ ಎಲ್ಲಾ ನೌಕರರು ಪ್ರತಿಜ್ಞೆ ಸ್ವೀಕರಿಸಿ ಆಚರಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next