Advertisement

ರಾಜಕೀಯದಾಗ ಜೋಡೆತ್ತಿನ ನಾಕ ಸರ್ತಿಗಾಡಿ ನಿಂತಾವ”: ಬೆಂಕಿ ಭವಿಷ್ಯ ನುಡಿರುವ ಶಿವಯ್ಯಮುತ್ಯಾ

04:37 PM Apr 11, 2024 | Team Udayavani |

ವಿಜಯಪುರ : ರಾಜಕೀಯದಾಗ ಜೋಡತ್ತಿನ ನಾಕ ಸರ್ತಿಗಾಡಿ ಮುಂದ ಹೊಂಟಾವ. ತ್ಯಾಗಿ, ಯೋಗಿ, ಭೋಗಿ, ಡೋಂಗಿ ಸರ್ತಿ ಗಾಡ್ಯಾಗ ಯಾವ ಹೊಡಿತೀರಿ ನೋಡ್ರಿ ಎಂದು ವಿಜಯಪುರ ತಾಲೂಕಿನ ಕತಕನಹಳ್ಳಿಯ ಚಕ್ರವರ್ತಿ ಬಬಲಾದಿ ಸದಾಶಿವ ಶಿವಯೋಗಿ ಪೀಠಾಧಿಪತಿ ಶಿವಯ್ಯ ಮುತ್ಯಾ ಕಾಲಜ್ಞಾನದ ಬೆಂಕಿ ಭವಿಷ್ಯ ನುಡಿದಿದ್ದಾರೆ.

Advertisement

ಗುರುವಾರ ಉತ್ತರ ಕರ್ನಾಟಕ ಭಾಗದಲ್ಲಿ ಬೆಂಕಿ ಭವಿಷ್ಯ ಎಂದೇ ಹೆಸರಾಗಿರುವ ಕತ್ನಳ್ಳಿ ಚಕ್ರವರ್ತಿ ಸದಾಶಿವ ಶಿವಯೋಗಿ ಯುಗಾದಿ ಜಾತ್ರೆಯ ಸಂದರ್ಭದಲ್ಲಿ ಪೀಠಾಧಿಪತಿ ಶಿವಯ್ಯ ಮುತ್ಯಾ ಕಾಲಜ್ಞಾನ ಆಧಾರಿತವಾಗಿ ಯುಗಾದಿ ಬೆಂಕಿ ಭವಿಷ್ಯ ನುಡಿದಿದ್ದಾರೆ.

ರೈತರದೂ ರಾಜಕೀಯ ಆಳಬೇಕ ಅನ್ನೋ ಕಂಪನಿ ಒಂದ ಗಂಟ ಬಿದೈತಿ. ನಮ್ಮಿಂದ ಆಗಲಿಂದ್ರ ಕಡೀಕ್ ಮಿಕ್ಸ್ ಬಾಜಿ ಮಾಡಬೇಕಂತ ಗಂಟ ಬಿದೈತಿ. ಹೆಂಗ ಮಾಡ್ತೀರಿ ನೋಡ್ರಿ ಎಂದು ಸೂಚಿಸಿದ್ದಾರೆ.

ಈ ವರ್ಷ ಬಹಳ ವಿಶೇವಾಗಿರುವ ವರ್ಷ. ಕ್ರೋಧಿನಾಮ ಸಂವತ್ಸರ. ಹೆಸರಿನ್ಯಾಗ ಕ್ರೋಧಿ ಐತಿ. ಕ್ರೋಧ ಇಟಗೊಂಡವ, ಸಿಟ್ಟು ಬಳಸಾಂವ, ಸಿಟ್ಟನ್ನು ಚಲಾವಣೆಯಲ್ಲಿ ತರಾವ್. ಸಿಟ್ಟನ್ ಸ್ವೀಕಾರ ಮಾಡಿ, ಮಸ್ತಕದೊಳಗ ಇಟಗೊಂಡಾವ ಕ್ರೋದಿ. ಕ್ರೋಧಿನಾಮ ಸಂವತ್ಸರ ಐತೆಂತ ಸಿಟ್ ತೆಲ್ಯಾಗ ಇಟಗೊಂಡ ತಿರಗಬ್ಯಾಡ್ರಿ, ರಾವಣನಂಗ, ಕೀಚಕನಂಗ ತಿರಗಬ್ಯಾಡ್ರಿ ಎಂದು ಸಂದೇಶ ನೀಡಿದ್ದಾರೆ.

ಇದನ್ನೂ ಓದಿ: Gas Leakage; ಗ್ಯಾರೇಜ್ ನಲ್ಲಿ ಇಟ್ಟಿದ್ದ ಕಾರು ಸುಟ್ಟು ಭಸ್ಮ… ಓರ್ವನಿಗೆ ಗಂಭೀರ ಗಾಯ!

Advertisement
Advertisement

Udayavani is now on Telegram. Click here to join our channel and stay updated with the latest news.

Next