Advertisement
ಕ್ಷೇತ್ರದ ಬಿಬಿಎಂಪಿ ವಾರ್ಡಿನ ಹೇರೋಹಳ್ಳಿ ಯಲ್ಲಿ ಬೆಳಿಗ್ಗೆ 6-00 ರಿಂದ ಪ್ರಾರಂಬಿಸಿ ಸಂಜೆ 4-00 ಕ್ಕೆ ದೊಡ್ಡಿಬಿದರಕಲ್ಲಿನಲ್ಲಿ ಅಂತ್ಯಗೊಳಿಸಿದರು, ಈ ಸಂದರ್ಭದಲ್ಲಿ ಅವರು ಪ್ರಮುಖ ಉದ್ಯಾನವನ ಹಾಗು ಕಾರ್ಯಕರ್ತರ ಮನೆಗಳಲ್ಲಿ ಸಭೆಗಳನ್ನು ನಡೆಸಿದರು ಜತೆಗೆ ಕೂಡಿಗೆಹಳ್ಳಿ ಗ್ರಾಮ ಪಂಚಾಯಿತಿಯ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಮತಯಾಚನೆಯನ್ನು ಮಾಡಿದರು.
Related Articles
Advertisement
ಮೆಟ್ರೋ ಮೂರನೇ ಹಂತಕ್ಕೆ ಕೇಂದ್ರದ ಪಾಲನ್ನು ಈಗಾಗಲೇ ಬಿಡುಗಡೆ ಮಾಡಿದ್ದು ಬೆಂಗಳೂರಿನ ಸಮಗ್ರ ಅಭಿವೃದ್ದಿಗೆ ಒತ್ತು ನೀಡಿದೆ ಎಂದರು.ಕ್ಷೇತ್ರದಾದ್ಯಂತ ಜನರ ಸ್ಫಂದನೆ ಉತ್ತಮವಾಗಿದ್ದು ಮುಂದಿನ 5 ವರ್ಷನರೇಂದ್ರ ಮೋದಿಜೀಯವರ ಸರ್ಕಾರಕ್ಕಾಗಿ ನನ್ನನ್ನು ಅತಿ ಹೆಚ್ಚು ಮತಗಳ ಅಂತರದಿಂದ ಜಯಶೀಲರನ್ನಾಗಿಸುತ್ತಾರೆ ಎಂಬ ಭರವಸೆ ಇದೆ ಎಂದರು.
ಈ ಸಂದರ್ಭದಲ್ಲಿ ಕ್ಷೇತ್ರ ಬಿಜೆಪಿ ಮಂಡಲಾದ್ಯಕ್ಷ ಸಿ.ಎಂ.ಮಾರೇಗೌಡ, ಪ್ರದಾನ ಕಾರ್ಯದರ್ಶಿ ಅನಂತರಾಜು,ಎಸ್ಸಿ ಮೋರ್ಚಾ ರಾಜ್ಯ ಕಾರ್ಯದರ್ಶೀ ರಘು, ಒಬಿಸಿ ಉಪಾಧ್ಯಕ್ಷ ರಘನಂದನ್, ಮಾಜಿ ಪಾಲಿಕೆ ಸದಸ್ಯ ರ.ಅಂಜಿನಪ್ಪ, ಹಿಂದುಳಿದ ವರ್ಗದ ಪ್ರದಾನ ಕಾರ್ಯದರ್ಶಿ ಜೆ.ರಮೇಶ್,
-ಯುವ ಮೋರ್ಚಾದ ಮನು, ಮಹಿಳಾ ಮೋರ್ಚಾ ಅಧ್ಯಕ್ಷೆ ಗಾಯಿತ್ರಿಗೌಡ,ಸೌಮ್ಯ ಬಾರ್ಗವ,ನವೀಗೌಡ, ಕಾರ್ಮಿಕ ಪ್ರಕೋಷ್ಟ ಅಧ್ಯಕ್ಷ ಉಪೇಂದ್ರ ಕುಮಾರ್, ಕೆಂಗೇರಿ ವಾರ್ಡ್ ಅಧ್ಯಕ್ಷ ನಾಗರಾಜ್,ನವೀನ್ ಸೇರಿದಂತೆ ನೂರಾರು ಕಾರ್ಯಕರ್ತರು ಪ್ರಚಾರ ಕಾರ್ಯದಲ್ಲಿ ಇದ್ದರು.