Advertisement

ಪ್ರಮೋದ್ ಸಾವಂತ್ ಅವರ ನೇತೃತ್ವದಲ್ಲೇ ವಿಧಾನಸಭಾ ಚುನಾವಣೆ ಎದುರಿಸಲಾಗುವುದು : ಸದಾನಂದ ಶೇಟ್

02:40 PM Sep 18, 2021 | Team Udayavani |

ಪಣಜಿ: ಗುಜರಾತ್, ಕರ್ನಾಟಕ ಸೇರಿದಂತೆ ಬಿಜೆಪಿ ಆಡಳಿತ ರಾಜ್ಯಗಳಲ್ಲಿ ಮುಖ್ಯಮಂತ್ರಿಗಳ ಬದಲಾವಣೆ ಮಾಡಲಾಗಿದ್ದರೂ ಕೂಡ ಗೋವಾ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಮುಖ್ಯಮಂತ್ರಿ ಬದಲಾಯಿಸುವ ವಿಚಾರವಿಲ್ಲ.

Advertisement

ರಾಜ್ಯ ವಿಧಾನಸಭಾ ಚುನಾವಣೆಯನ್ನು ಮುಖ್ಯಮಂತ್ರಿ ಪ್ರಮೋದ ಸಾವಂತ್ ರವರ ನೇತೃತ್ವದಲ್ಲಿ ಎದುರಿಸಲಾಗುವುದು ಎಂದು ಗೋವಾ ಬಿಜೆಪಿ ಪ್ರದೇಶಾಧ್ಯಕ್ಷ ಸದಾನಂದ ಶೇಟ್ ತಾನಾವಡೆ ನುಡಿದರು.

ಮಾಪ್ಸಾದಲ್ಲಿ ಆಯೋಜಿಸಿದ್ದ ಸೇವಾ ಔರ್ ಸಮರ್ಪಣ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡುತ್ತಿದ್ದರು.
ಬಿಜೆಪಿಯಲ್ಲಿ ಚುನಾವಣಾ ಉಮೇದುವಾರರ ಆಯ್ಕೆ ಸಂದರ್ಭದಲ್ಲಿ ಮಂಡಳ ಸಮೀತಿಯ ಮೂಲಕವೇ ಆಯ್ಕೆ ನಡೆಯುತ್ತದೆ, ಕೇಂದ್ರ ಸಮೀತಿ ಇದಕ್ಕೆ ಸಮ್ಮತಿ ಸೂಚಿಸುತ್ತದೆ. ಇದರಿಂದಾಗಿ ಉಮೇದುವಾರರಿಗೆ ಸಂಬಂಧಿಸಿದಂತೆ ಸೂಕ್ತ ಸಂದರ್ಭದಲ್ಲಿ ಕೇಂದ್ರ ಸಮೀತಿಯು ನಿರ್ಣಯ ತೆಗೆದುಕೊಳ್ಳಲಿದೆ ಎಂದು ಸದಾನಂದ ತಾನಾವಡೆ ನುಡಿದರು.

ಇದನ್ನೂ ಓದಿ :ನದಿಗೆ ಹಾರಿದ ಯುವಕ : ರಕ್ಷಣೆಗೆ ಬಾರದ ಇಲಾಖೆ ವಿರುದ್ಧ ಸಾರ್ವಜನಿಕರಿಂದ ಆಕ್ರೋಶ

Advertisement

Udayavani is now on Telegram. Click here to join our channel and stay updated with the latest news.

Next