Advertisement

ದೇವೇಗೌಡ, ಖರ್ಗೆ ಸೋಲಬಾರದಿತ್ತು: ಪೇಜಾವರ ಶ್ರೀ ಬೇಸರ

10:19 AM Jun 02, 2019 | Team Udayavani |

ಮೈಸೂರು: ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ, ಮಲ್ಲಿಕಾರ್ಜುನ ಖರ್ಗೆ ಅವರ ಸೋಲು ಬೇಸರ ತಂದಿದೆ ಎಂದು ಪೇಜಾವರ  ಮಠದ  ವಿಶ್ವೇಶ್ವರ ತೀರ್ಥ ಶ್ರೀ ಶುಕ್ರವಾರ ಹೇಳಿಕೆ ನೀಡಿದ್ದಾರೆ.

Advertisement

ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸಿದ ಶ್ರೀಗಳು , ದೇಶದಲ್ಲಿ ಸರ್ವಧರ್ಮ ಸಮಾನತೆ ಜಾರಿಯಾಗಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಗಾಂಧಿಯನ್ನು ಕೊಂದ ಗೋಡ್ಸೆ ದೇಶ ಭಕ್ತ ಎಂದಿರುವ ಬಿಜೆಪಿ ಸಂಸದರ ವಿರುದ್ಧ ನನಗೆ ಬಹಳ ಅಸಮಾಧಾನ ಇದೆ ಎಂದು ಪುನರುಚ್ಛರಿಸಿದರು.

ರಾಜ್ಯ ಸಭೆಯಲ್ಲೂ ಬಹುಮತ ದೊರಕುತ್ತದೆ. ಈ ಬಾರಿ ರಾಮಮಂದಿರ ನಿರ್ಮಾಣಕ್ಕೆ ಪ್ರಧಾನಿ ಮೋದಿ ಸರ್ಕಾರ ಬದ್ಧತೆ ತೋರಬೇಕು.ಗೋಹತ್ಯೆ ನಿಷೇಧವಾಗಬೇಕು ಎಂದರು.

ರಾಮ ಮಂದಿರ ನಿರ್ಮಾಣವಾಗದೇ ಇದ್ದಲ್ಲಿ ಸಂತರೆಲ್ಲ ಒಟ್ಟಿಗೆ ಕುಳಿತು ನಿರ್ಧಾರ ಕೈಗೊಳ್ಳುತ್ತೇವೆ. ಅಂತಹ ಪರಿಸ್ಥಿತಿ ಬರುವುದಿಲ್ಲ ಎನ್ನುವ ವಿಶ್ವಾಸ ನಮಗಿದೆ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next