Advertisement

“CPM ನಿಂದಾಗಿ ಮುಸ್ಲಿಂ ಮಹಿಳೆಯರ ಹಿಜಾಬ್‌ ತ್ಯಾಗ”- CPM ನಾಯಕ ಕೆ.ಅನಿಲ್‌ ಕುಮಾರ್‌ ಹೇಳಿಕೆ

12:16 AM Oct 04, 2023 | Team Udayavani |

ಮಲಪ್ಪುರಂ: “ಸಿಪಿಎಂ ಪ್ರಭಾವದಿಂದಾಗಿ ಮಲ್ಲ ಪುರಂ ಜಿಲ್ಲೆಯಲ್ಲಿ ಮುಸ್ಲಿಂ ಮಹಿಳೆ ಯರು ಹಿಜಾಬ್‌ ತ್ಯಜಿಸುತ್ತಿದ್ದಾರೆ’ ಎಂದು ಸಿಪಿಎಂ ನಾಯಕ ಕೆ.ಅನಿಲ್‌ ಕುಮಾರ್‌ ಹೇಳಿದ್ದಾರೆ. ಈವರ ಈ ಹೇಳಿಕೆಯು ಮುಸ್ಲಿಂ ಮೂಲಭೂತವಾದಿಗಳ ಆಕ್ರೋಶಕ್ಕೆ ಕಾರಣವಾಗಿದೆ.

Advertisement

ಮಲ್ಲಪುರನಲ್ಲಿ ಮಂಗಳವಾರ ಮಾತನಾಡಿದ ಅವರು, “ಜಿಲ್ಲೆಯಲ್ಲಿ ಶಿಕ್ಷಣ ವ್ಯವಸ್ಥೆ ಅಭಿವೃದ್ಧಿಯಾಗಿದೆ. ಇದಕ್ಕೆ ಕೆಲವು ಧಾರ್ಮಿಕ ಸಂಘಟನೆಗಳು ಕಾರಣವೇ?. ಸಿಪಿಎಂ ಮಲ್ಲಪುರ ಜಿಲ್ಲೆಯ ಉಗಮಕ್ಕೆ ಕಾರಣವಾಗಿದೆ’ ಎಂದಿದ್ದಾರೆ. “ರಾಜ್ಯದಲ್ಲಿ ಶಿಕ್ಷಣ ವ್ಯವಸ್ಥೆಯನ್ನು ಸಿಪಿಎಂ ಉನ್ನತೀಕರಿಸಿದೆ. ಪಕ್ಷದ ಪ್ರಭಾವದಿಂದಾಗಿ ಈಗ ಮುಸ್ಲಿಂ ಯುವತಿಯರು ಹಿಜಾಬ್‌ ಧರಿಸಲು ನಿರಾಕರಿಸುತ್ತಿದ್ದಾರೆ’ ಎಂದು ಹೇಳಿದ್ದಾರೆ.

“ಸಿಪಿಎಂ ಇಬ್ಬಗೆಯ ನೀತಿ ಅನುಸರಿಸುತ್ತಿದೆ’ ಎಂದು ಸುನ್ನಿ ಸಂಘಟನೆ “ಸಂಸ್ಥಾ’ ಆರೋಪಿಸಿದೆ. ಐಯುಎಂಲ್‌ ಕೂಡ ಹೇಳಿಕೆಯನ್ನು ಖಂಡಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next