Advertisement

ಸುಪ್ರೀಂ ಕೋರ್ಟ್‌ ಮೆಟ್ಟಲೇರಿದ ಮಾಜಿ ಬಿಎಸ್‌ಎಫ್ ಜವಾನ ತೇಜ್‌ ಬಹಾದ್ದೂರ್‌

08:40 AM May 07, 2019 | Team Udayavani |

ಹೊಸದಿಲ್ಲಿ : ಸೇನೆಯಿಂದ ಅಮಾನತಾಗಿದ್ದ ಬಿಎಸ್‌ಎಫ್ ಜವಾನ ತೇಜ್‌ ಬಹಾದ್ದೂರ್‌ ಯಾದವ್‌ ಅವರು ವಾರಾಣಸಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುವ ತನ್ನ ಉಮೇದ್ವಾರಿಕೆಯನ್ನು ಚುನಾವಣಾ ಆಯೋಗ ರದ್ದು ಪಡಿಸಿದ ನಿರ್ಧಾರವನ್ನು ಪ್ರಶ್ನಿಸಿ ಇಂದು ಸೋಮವಾರ ಸುಪ್ರೀಂ ಕೋರ್ಟ್‌ ಮೆಟ್ಟಲೇರಿದ್ದಾರೆ.

Advertisement

ವಾರಾಣಸಿ ಕ್ಷೇತ್ರದಿಂದ ಪ್ರಧಾನಿ ನರೇಂದ್ರ ಮೋದಿ ಅವರು ಲೋಕಸಭೆಗೆ ಸ್ಪರ್ಧಿಸುತ್ತಿದ್ದಾರೆ.

ಸೇನೆಗೆ ಕಳಪೆ ಆಹಾರ ಪೂರೈಸಲಾಗುತ್ತಿದೆ ಎಂದು ಆರೋಪಿಸಿ ತಾನೇ ಮಾಡಿಕೊಂಡಿದ್ದ ವಿಡಿಯೋ ಚಿತ್ರಿಕೆಯನ್ನು ಸಾಮಾಜಿಕ ಜಾಲ ತಾಣಕ್ಕೆ ಹಾಕಿದ್ದ ಯಾದವ್‌ ಅವರು 2017 ರಲ್ಲಿ ಸೇನೆಯ ಶಿಸ್ತು ಕ್ರಮದಿಂದ ಅಮಾನತಾಗಿದ್ದರು.

ವಾರದ ಹಿಂದಿನ ದಿಢೀರ್‌ ಬೆಳವಣಿಗೆಯಲ್ಲಿ ಸಮಾಜವಾದಿ ಪಕ್ಷ ಯಾದವ್‌ ಗೆ ವಾರಾಣಸಿ ಕ್ಷೇತ್ರದಿಂದ ಸ್ಪರ್ಧಿಸಲು ಟಿಕೆಟ್‌ ನೀಡಿತ್ತು.

Advertisement

Udayavani is now on Telegram. Click here to join our channel and stay updated with the latest news.

Next