Advertisement

ಬಾಂದ್ರಾದಲ್ಲಿ ತೆಂಡುಲ್ಕರ್‌ಮತದಾನ

11:32 PM Oct 21, 2019 | mahesh |

ಮುಂಬಯಿ : ಕ್ರಿಕೆಟಿನ ಮೇರು ತಾರೆ ಸಚಿನ್‌ ತೆಂಡುಲ್ಕರ್‌ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಮತ ಚಲಾಯಿಸಿ ನಾಗರಿಕನಾಗಿ ತನ್ನ ಸಾಂವಿಧಾನಿಕ ಜವಾಬ್ದಾರಿಯನ್ನು ಈಡೇರಿಸಿದ್ದಾರೆ.

Advertisement

ಉಪನಗರ ಬಾಂದ್ರಾ ಮತಗಟ್ಟೆಯಲ್ಲಿ ಪತ್ನಿ ಡಾ| ಅಂಜಲಿ ಮತ್ತು ಪುತ್ರ ಅರ್ಜುನ್‌ ಜತೆಗೆ ಬಂದು ಸಚಿನ್‌ ಮತ ಚಲಾಯಿಸಿದರು. ಇದೇ ವೇಳೆ ಅವರು ಎಲ್ಲರೂ ಮತ ಹಾಕಬೇಕೆಂದು ಮನವಿ ಮಾಡಿ ಜಾಗೃತಿ ಮೂಡಿಸಿದರು.

ಮತ ಹಾಕುತ್ತೇವೆ ಎಂದು ಹೇಳಿದ ಮೂವರು ಹಿರಿಯ ನಾಗರಿಕರ ಕುರಿತಾಗಿ ಪ್ರಕಟವಾಗಿದ್ದ ಲೇಖನವೊಂದನ್ನು ಉಲ್ಲೇಖೀಸಿದ ತೆಂಡುಲ್ಕರ್‌, “ಈಗ ನಾವು ನಮ್ಮ ಕರ್ತವ್ಯವನ್ನು ಈಡೇರಿಸಿದರೆ ಬದಲಾವಣೆಯನ್ನು ಕಾಣಲು ಸಾಧ್ಯ. ಮತದಾನದ ಹಕ್ಕು ಇರುವ ಎಲ್ಲರೂ ತಪ್ಪದೆ ಮತದಾನ ಮಾಡಬೇಕು’ ಎಂದರು.

ಮಾಜಿ ಕ್ರಿಕೆಟಿಗರಾದ ಸಂದೀಪ್‌ ಪಾಟೀಲ್‌, ದಿಲೀಪ್‌ ವೆಂಗ್‌ಸರ್ಕಾರ್‌, ವಿನೋದ್‌ ಕಾಂಬ್ಳಿ, ರಮೇಶ್‌ ಪೊವಾರ್‌, ಟೆನಿಸಿಗ ಮಹೇಶ್‌ ಭೂಪತಿ, ಮುಂಬೈ ಸಿಟಿ ಎಫ್ಸಿ ಫ‌ುಟ್ಬಾಲಿಗರಾದ ಕುನಾಲ್‌ ಸಾವಂತ್‌, ಪ್ರತೀಕ್‌ ಚೌಧರಿ ಮತ ಚಲಾಯಿಸಿದ ಪ್ರಮುಖ ಕ್ರೀಡಾಪಟುಗಳು.

Advertisement

Udayavani is now on Telegram. Click here to join our channel and stay updated with the latest news.

Next