Advertisement

ಪ್ರಧಾನಿ ಪರಿಹಾರ ನಿಧಿಗೆ  ವೇತ ನ ಕೊಟ್ಟ ಸಚಿನ್‌

07:17 AM Apr 02, 2018 | Team Udayavani |

ಮುಂಬಯಿ: ಇತ್ತೀಚೆಗಷ್ಟೇ ರಾಜ್ಯಸಭಾ ಸದಸ್ಯ ಸ್ಥಾನದಿಂದ ನಿವೃತ್ತರಾದ ಕ್ರಿಕೆಟ್‌ ದೇವರು ಸಚಿನ್‌ ತೆಂಡೂಲ್ಕರ್‌ ಅವರು ರಾಜ್ಯ ಸಭಾ ಸದಸ್ಯರಾಗಿ ತಾವು ಪಡೆದ ಸಂಪೂರ್ಣ ವೇತನ ಹಾಗೂ ಭತ್ಯೆಗಳ ಮೊತ್ತವನ್ನು ಪ್ರಧಾನ ಮಂತ್ರಿ ಪರಿಹಾರ ನಿಧಿಗೆ ದೇಣಿಗೆಯಾಗಿ ನೀಡಿದ್ದಾರೆ. 

Advertisement

6 ವರ್ಷಗಳಲ್ಲಿ ತೆಂಡೂ ಲ್ಕರ್‌ 90 ಲಕ್ಷ ರೂ.ಗಳನ್ನು ವೇತನ ಹಾಗೂ ಇತರೆ ಭತ್ಯೆಯ ರೂಪದಲ್ಲಿ ಪಡೆದಿದ್ದಾರೆ. ಈ ಮೊತ್ತವನ್ನು ಅವರು ಪರಿಹಾರ ನಿಧಿಗೆ ಅರ್ಪಿಸಿದ್ದು, ತೆಂಡೂಲ್ಕರ್‌ರ ನಿರ್ಧಾರಕ್ಕೆ ಪಿಎಂಒ ಮೆಚ್ಚುಗೆ ವ್ಯಕ್ತಪಡಿಸಿದೆ.

ಕಲಾಪಗಳಿಗೆ ಗೈರಾಗುತ್ತಿದ್ದುದರ ಕುರಿತು ತೆಂಡೂಲ್ಕರ್‌ ವಿರುದ್ಧ ಟೀಕೆಗಳು ಕೇಳಿಬಂದಿದ್ದವು. ಆದರೆ, ಸಚಿನ್‌ ತಮ್ಮ “ಸಂಸದರ ಸ್ಥಳೀಯಾಭಿವೃದ್ಧಿ ನಿಧಿ’ಯನ್ನು ಸದ್ಬಳಕೆ ಮಾಡಿಕೊಂಡಿದ್ದರು. ಅಷ್ಟೇ ಅಲ್ಲದೆ, ಸಂಸದರ ಆದರ್ಶ ಗ್ರಾಮ ಯೋಜನೆಯಡಿ ಅವರು ಆಂಧ್ರಪ್ರದೇಶದ ಪುಟ್ಟಮ್‌ ರಾಜು ಮತ್ತು ಮಹಾ ರಾಷ್ಟ್ರದ ದೊಂಜಾ ಗ್ರಾಮಗಳನ್ನು ದತ್ತು ಪಡೆದು, ಅವುಗಳನ್ನು ಅಭಿವೃದ್ಧಿಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next