Advertisement

ಸಕಲೇಶಪುರ ದೊಡ್ಡಕೆರೆಗೆ ಬೇಕಿದೆ ಕಾಯಕಲ್ಪ

03:30 PM Apr 23, 2019 | Suhan S |

● ಸುಧೀರ್‌ ಎಸ್‌.ಎಲ್

Advertisement

ಸಕಲೇಶಪುರ: ಪಟ್ಟಣದ ಜನರ ಕನಸಿನ ಕೂಸಾದ ದೊಡ್ಡಕೆರೆ ನಿತ್ಯ ನೂರಾರು ಜನರನ್ನು ತನ್ನತ್ತ ಸೆಳೆಯುತ್ತಿದೆ. ಆದರೆ ಈ ಸುಂದರ ಕೆರೆ ಹಲವು ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿದೆ.

ಪಟ್ಟಣದ ಅಯ್ಯಪ್ಪಸ್ವಾಮಿ ದೇವಾಲಯಕ್ಕೆ ಹೋಗುವ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ. 193ರಲ್ಲಿ ಸುಮಾರು 5.25 ಎಕರೆಯಷ್ಟು ಪ್ರದೇಶದಲ್ಲಿ ಸರ್ಕಾರಿ ಕೆರೆ ಹಲವು ವರ್ಷಗಳ ಕಾಲ ಹಾಳು ಬಿದ್ದಿತ್ತು. ಈ ಹಿನ್ನೆಲೆಯಲ್ಲಿ ಕೇಂದ್ರ ರಾಜ್ಯ ಸಮನ್ವಯ ಅಧಿಕಾರಿ ಬೈಕೆರೆ ನಾಗೇಶ್‌ ವಿಶೇಷ ಆಸಕ್ತಿ ವಹಿಸಿ ಕೆರೆಯನ್ನು ಅಭಿವೃದ್ಧಿ ಪಡಿಸಲು ಸುಮಾರು 1.5ಕೋಟಿಗೂ ಹೆಚ್ಚು ಅನುದಾನವನ್ನು ಕಳೆದ ನಾಲ್ಕು ವರ್ಷಗಳ ಹಿಂದೆ ಬಿಡುಗಡೆ ಮಾಡಿಸಿದ್ದರು.

ಹೂಳು ತೆಗೆಯಲು ಸುಮಾರು ಎರಡು ವರ್ಷಗಳ ಕಾಲ ತೆಗೆದುಕೊಂಡ ಗುತ್ತಿಗೆದಾರರು ಕಳೆದ 2ವರ್ಷಗಳ ಹಿಂದೆ ಕಾಮಗಾರಿ ಮುಗಿಸುವಲ್ಲಿ ಯಶಸ್ವಿಯಾಗಿದ್ದು, ಅಂತಿಮವಾಗಿ ಶಾಸಕ ಎಚ್.ಕೆ ಕುಮಾರಸ್ವಾಮಿ ಅವರು ಕಾಮಗಾರಿಯನ್ನು ಉದ್ಘಾಟಿಸಿದ್ದರು. ಕೆರೆಯ ಸುತ್ತಲು ವಾಕಿಂಗ್‌ ಪಾತ್‌ ಮಾಡಲಾಗಿದ್ದು ನಿತ್ಯ ನೂರಾರು ಜನ ವಾಕಿಂಗ್‌ ಮಾಡಲು ಇಲ್ಲಿಗೆ ಬರುತ್ತಿದ್ದಾರೆ.

ಕೆರೆಗೆ ಶೌಚಾಲಯದ ನೀರು: ಕೆರೆಯ ಕೊನೆ ಭಾಗ ದಲ್ಲಿರುವ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದ ಶೌಚಾಲ ಯದಿಂದ ಕಲುಷಿತ ನೀರನ್ನು ನೇರವಾಗಿ ಕೆರೆಗೆ ಬಿಡುತ್ತಿರುವುದರಿಂದ ಕೆರೆಯ ನೀರು ಮಲಿನ ಗೊಂಡು ಗಬ್ಬು ವಾಸನೆ ಬರುತ್ತಿದ್ದು, ವಾಕಿಂಗ್‌ ಮಾಡಲು ಬರುವವರು ಮೂಗು ಮುಚ್ಚಿಕೊಂಡು ವಾಕಿಂಗ್‌ ಮಾಡಬೇಕಾಗಿದೆ. ಈ ಹಿನ್ನೆಲೆಯಲ್ಲಿ ಮೊದ ಲಿಗೆ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದ ಶೌಚಾಲಯದ ಕಲುಷಿತ ನೀರನ್ನು ಬೇರೆಡೆಗೆ ಬಿಡಲು ಕೂಡಲೇ ಕ್ರಮ ಕೈಗೊಳ್ಳಬೇಕಾಗಿದೆ.

Advertisement

ಕೆರೆಯ ಸುತ್ತ ಗಿಡಗೆಂಟೆ: ಕೆರೆ ಆವರಣದ ಸುತ್ತಲು ಗಿಡಗುಂಟೆಗಳು ಕಾಡಿನಂತೆ ಬೆಳೆದಿದ್ದು,ಇದನ್ನು ತೆಗೆ ಯಲು ಯಾರು ಮುಂದಾಗಿಲ್ಲ. ಈ ಹಿಂದೆ ರೋಟರಿ ಸಂಸ್ಥೆಯವರು ಒಮ್ಮೆ ಇಲ್ಲಿರುವ ಗಿಡ ಗುಂಟೆಗಳನ್ನು ತೆಗೆಸಿದ್ದು ನಂತರ ಇದರ ಉಸ್ತುವಾರಿಯನ್ನು ಯಾರೂ ವಹಿಸಿಕೊಂಡಿಲ್ಲ. ಇಲ್ಲಿರುವ ಹೈಮಾಸ್ಟ್‌ ದೀಪ ಹಾಳಾಗಿರುವ ಕಾರಣ ಕತ್ತಲಾದ ನಂತರ ವಾಕಿಂಗ್‌ ಮಾಡುವುದು ಅಸಾಧ್ಯವಾಗಿದೆ.

ಕೂರಲು ಬೆಂಚ್‌ಗಳಿಲ್ಲ: ಕೆರೆಯ ವಾಕಿಂಗ್‌ ಪಾತ್‌ ಸುತ್ತಲೂ ಬೆಂಚ್‌ಗಳನ್ನು ಅಳವಡಿಸಬೇಕಾಗಿದ್ದು ಬೆಂಚ್‌ಗಳು ಇಲ್ಲದೆ ವಿಶ್ರಾಂತಿ ಪಡೆಯಲು ಕೆರೆ ಸಮೀಪದ ಕಟ್ಟೆಯಲ್ಲಿ ಕೂರಬೇಕಾಗಿದೆ.

ಮಕ್ಕಳ ಆಟಿಕೆಗಳಿಲ್ಲ: ಮಕ್ಕಳ ಮನೋರಂಜನೆಗಾಗಿ ಮಿನಿ ಪಾರ್ಕ್‌ ಮಾಡಲು ಜಾಗ ಬಿಡಲಾಗಿದೆ. ಆದರೆ ಈ ಜಾಗದಲ್ಲಿ ಮಕ್ಕಳ ಆಟದ ವಸ್ತುಗಳನ್ನು ಸಹ ಹಾಕಿರುವುದಿಲ್ಲ. ಕೂಡಲೇ ಇಲ್ಲಿ ಮಕ್ಕಳಿಗಾಗಿ ಮಿನಿ ಪಾರ್ಕ್‌ ಮಾಡಲು ಕ್ರಮ ಕೈಗೊಳ್ಳಬೇಕಾಗಿದೆ.

ಬೋಟಿಂಗ್‌ ವ್ಯವಸ್ಥೆ ಮಾಡಿ: ಹೊರ ಊರು ಗಳಿಂದಲೂ ಸಹ ಇಲ್ಲಿನ ಜನ ಇಲ್ಲಿಗೆ ಬರುತ್ತಿದ್ದು ಬೋಟಿಂಗ್‌ ವ್ಯವಸ್ಥೆ ಮಾಡಿದಲ್ಲಿ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವುದರಲ್ಲಿ ಅನುಮಾನವಿಲ್ಲ. ಬೋಟಿಂಗ್‌ ವ್ಯವಸ್ಥೆ ಮಾಡಲು ಕ್ರಮ ಕೈಗೊಂಡಲ್ಲಿ ತಾಲೂಕಿನ ಪ್ರವಾಸೋದ್ಯಮ ಅಭಿವೃದ್ಧಿಗೂ ಸಹ ಸಹಾಯವಾಗುವುದು. ಈ ಹಿಂದೆ ನೀರಾವರಿ ಇಲಾಖೆ ವಶದಲ್ಲಿದ್ದ ಕೆರೆಯನ್ನು ಪುರಸಭೆಯ ಸುರ್ಪದಿಗೆ ನೀಡಲಾಗಿದೆ. ಕೆರೆ ಇನ್ನಾದರೂ ಅಭಿವೃದ್ಧಿ ಯಾಗುವುದೇ ಎಂದು ಕಾದು ನೋಡಬೇಕಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next