Advertisement

ತಪ್ಪಾಯಿತು ದೇವಿ ಕ್ಷಮಿಸಿಬಿಡಿ: ಚಾಮುಂಡಿ ಬೆಟ್ಟದಲ್ಲಿ ಸಾ.ರಾ. ಮಹೇಶ್

10:41 AM Oct 19, 2019 | Team Udayavani |

ಮೈಸೂರು: ಅನರ್ಹ ಶಾಸಕ ಎಚ್.ವಿಶ್ವನಾಥ್ ಜೊತೆಗಿನ ಆಣೆ ಪ್ರಮಾಣ ರಾಜಕೀಯ ಜಿದ್ದಿಗೆ ಗುರುವಾರ ಚಾಮುಂಡೇಶ್ವರಿ ಸನ್ನಿಧಿಯಲ್ಲಿ ಹೈಡ್ರಾಮಾ ನಡೆಸಿದ್ದ ಮಾಜಿ ಸಚಿವ ಸಾ.ರಾ.ಮಹೇಶ್ ಶುಕ್ರವಾರ ಮತ್ತೆ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿದರು.

Advertisement

ಚಾಮುಂಡಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿ ತಮ್ಮ ರಾಜಕಾರಣಕ್ಕೆ ನಾಡದೇವತೆ ಸನ್ನಿಧಿಯನ್ನು ಬಳಸಿಕೊಂಡಿದ್ದಕ್ಕೆ ವಿಷಾದ ವ್ಯಕ್ತಪಡಿಸಿ ತಾಯಿ ಚಾಮುಂಡೇಶ್ವರಿ ಹಾಗೂ ನಾಡಿನ ಜನತೆಯ ಕ್ಷಮೆ ಕೋರಿದರು.

ಗುರುವಾರದ ಘಟನೆ ಬಗ್ಗೆ ಹಲವು ಹಿರಿಯರು ರಾಜಕಾರಣದಲ್ಲಿ ಈ ರೀತಿ ನಡೆದುಕೊಳ್ಳಬಾರದು ಎಂದು ಕಿವಿಮಾತು ಹೇಳಿದ್ದರಿಂದ ತಪ್ಪಿನ ಅರಿವಾಗಿ ಮತ್ತೆ ದೇವಿಯ ಸನ್ನಿಧಿಗೆ ಬಂದು ಕ್ಷಮೆ ಕೋರಿದ್ದೇನೆ. ಇನ್ನು ಮುಂದೆ ಈ ವಿಚಾರವಾಗಿ ಮಾತನಾಡುವುದಿಲ್ಲ ಎಂದು ಶಪಥ ಮಾಡಿದರು.

ಆಣೆ-ಪ್ರಮಾಣದ ರಾಜಕೀಯಕ್ಕೆ ಚಾಮುಂಡೇಶ್ವರಿ ದೇವಿಯ ಸನ್ನಿಧಿಯನ್ನು ಬಳಸಿಕೊಂಡಿದ್ದು ತಪ್ಪಾಯಿತು ಎಂದ ಮಾಜಿ ಸಚಿವ ಸಾ.ರಾ.ಮಹೇಶ್ ತಪ್ಪೊಪ್ಪಿಕೊಂಡರು.

Advertisement

Udayavani is now on Telegram. Click here to join our channel and stay updated with the latest news.

Next