Advertisement

ಚುನಾವಣೆ ಕಣದಿಂದ ಹಿಂದೆಸರಿದ ಶಾಸಕ ರವೀಂದ್ರನಾಥ್‌

08:54 PM Apr 04, 2023 | Team Udayavani |

ದಾವಣಗೆರೆ: ಉಡುಪಿ ಜಿಲ್ಲೆ ಕುಂದಾಪುರದ ಶಾಸಕ ಹಾಲಾಡಿ ಶ್ರೀನಿವಾಸಶೆಟ್ಟಿ ಅವರ ಹಾದಿಯಲ್ಲೇ ಸಾಗಿರುವ ರಾಜ್ಯ ಬಿಜೆಪಿಯ ಮತ್ತೂಬ್ಬ ಹಿರಿಯ ನಾಯಕ, ಮಾಜಿ ಸಚಿವ, ದಾವಣಗೆರೆ ಉತ್ತರ ಕ್ಷೇತ್ರದ ಶಾಸಕ ಎಸ್‌.ಎ. ರವೀಂದ್ರನಾಥ್‌ ಅವರು, ಅನಾರೋಗ್ಯದ ಕಾರಣ ಹೇಳಿ ಚುನಾವಣಾ ಕಣದಿಂದ ಹಿಂದೆ ಸರಿದಿದ್ದಾರೆ.

Advertisement

ರಾಜಕಾರಣದಲ್ಲಿ ಸಕ್ರಿಯರಾಗಿದ್ದ ರವೀಂದ್ರನಾಥ್‌, ಇತ್ತೀಚೆಗೆ ಕಾಲಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಚುನಾವಣೆ ವೇಳೆ ಚೇತರಿಸಿಕೊಳ್ಳುವ ವಿಶ್ವಾಸದಲ್ಲಿದ್ದರು. ಆದರೆ ಕಾಡುತ್ತಿರುವ ಕಾಲುನೋವಿನ ಕಾರಣದಿಂದ ಸ್ಪರ್ಧಿಸದಿರಲು ನಿರ್ಧರಿಸಿದ್ದಾರೆ. ಲೋಕಸಭಾ ಚುನಾವಣೆ ವೇಳೆಗೆ ಆರೋಗ್ಯ ಸುಧಾರಿಸಿದರೆ ಸಂಸದ ಸ್ಥಾನಕ್ಕೆ ಸ್ಪರ್ಧಿಸುವ ಇಚ್ಛೆ ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next