Advertisement

ಕ್ಷಿಪ್ರ ದಂಗೆಯಿಂದ ಆಂತರಿಕ ಭದ್ರತೆಗೆ ಧಕ್ಕೆ: ರಷ್ಯಾ ಪ್ರಧಾನಿ

08:00 PM Jun 26, 2023 | Team Udayavani |

ಮಾಸ್ಕೋ: ವ್ಯಾಗ್ನರ್‌ ಪಡೆಯ ಕ್ಷಿಪ್ರ ದಂಗೆಯಿಂದ ದೇಶದ ಆಂತರಿಕ ಭದ್ರತೆಗೆ ಸವಾಲಾಗಿ ಪರಿಣಮಿಸಿದೆ ಎಂದು ರಷ್ಯಾದ ಪ್ರಧಾನಮಂತ್ರಿ ಮಿಖಾಯಿಲ್‌ ಮಿಶುಸ್ಟಿನ್‌ ಒಪ್ಪಿಕೊಂಡಿದ್ದಾರೆ.

Advertisement

ದಂಗೆಯ ಬಳಿಕ ನಡೆದಿದ್ದ ಮೊದಲ ಸಂಪುಟ ಸಭೆಯಲ್ಲಿ ಅಂಶವನ್ನು ಮೊದಲ ಬಾರಿಗೆ ಒಪ್ಪಿಕೊಳ್ಳಲಾಗಿದೆ ಎಂದು ಹಲವು ಮಾಧ್ಯಮ ವರದಿಗಳಲ್ಲಿ ಉಲ್ಲೇಖೀಸಲಾಗಿದೆ. ಸರ್ಕಾರದ ಎಲ್ಲಾ ಕೆಲಸಗಳು ಸುಸೂತ್ರವಾಗಿ ನಡೆಯುತ್ತಿದೆ ಎಂದು ಅವರು ಹೇಳಿಕೊಂಡಿದ್ದಾರೆ. ಇದೇ ವೇಳೆ, ರಷ್ಯಾ ರಕ್ಷಣಾ ಸಚಿವ ಸರ್ಗೆ ಶಿಗೋ ಕೂಡ ಸಾರ್ವಜನಿಕವಾಗಿ ಕಾಣಿಸಿಕೊಂಡು ಪರಿಸ್ಥಿತಿ ನಿಯಂತ್ರಣದಲ್ಲಿ ಎಂದು ಹೇಳುವ ಪ್ರಯತ್ನ ಮಾಡಿದ್ದಾರೆ.

ಕತಾರ್‌ ದೊರೆ ಜತೆ ಚರ್ಚೆ:
ಈ ನಡುವೆ, ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಕತಾರ್‌ ದೊರೆ ಶೇಕ್‌ ತಮೀಮ್‌ ಬಿನ್‌ ಹಮ್ಮದ್‌ ಅಲ್‌ ತಹಾನಿ ಜತೆಗೆ ಫೋನ್‌ನಲ್ಲಿ ಮಾತುಕತೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ದಂಗೆಯನ್ನು ಹತ್ತಿಕ್ಕುವಲ್ಲಿ ಕೈಗೊಂಡ ಕ್ರಮಗಳನ್ನು ಪುಟಿನ್‌ ವಿವರಿಸಿದಾಗ ಅದಕ್ಕೆ ದೊರೆ ಸಮರ್ಥನೆ ನೀಡಿದರು ಎಂದು ರಷ್ಯಾ ಸರ್ಕಾರ ಪ್ರಕಟಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next